‘ತಮ್ಮ ಅವಧಿಯಲ್ಲಿ ಇಂಥ ಒಳ್ಳೆ ಕಾಯ್ದೆ ಜಾರಿಗೆ ತರಲಾಗಲಿಲ್ಲ ಎಂಬ ಕಾರಣಕ್ಕೆ ಮತ್ತು ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ಮನಮೋಹನ್ ಸಿಂಗ್ ಮತ್ತು ಅಂದಿನ ಕೃಷಿ ಸಚಿವ ಶರದ್ ಪವಾರ್ ಅವರು ಕೃಷಿ ಕ್ಷೇತ್ರದ ಸುಧಾರಣೆಗೆ ಮುಂದಾಗಿದ್ದರು. ಆದರೆ, ಕೆಲ ಮಂದಿಯ ಒತ್ತಡಗಳಿಂದಾಗಿ ಯುಪಿಎ ಈ ಸುಧಾರಣೆಗೆ ಧೈರ್ಯ ತೋರಿರಲಿಲ್ಲ,’ ಎಂದು ತೋಮರ್ ಹೇಳಿದ್ದಾರೆ.