ನವದೆಹಲಿ: ಬಿಜೆಪಿ ತನ್ನ ಸಾಂಸ್ಥಿಕ ಸಂಘಟನೆಯಲ್ಲಿ ಗಣನೀಯ ಬದಲಾವಣೆ ಮಾಡಿದೆ. ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು ಒಳಗೊಂಡಂತೆ ಪ್ರಮುಖರಾಗಿ ರಾಜ್ಯಗಳ ಉಸ್ತುವಾರಿ ಸೇರಿದಂತೆ ಪ್ರಮುಖ ಹೊಣೆಗಾರಿಕೆ ನೀಡಿದೆ.
ಇದುವರೆಗೂ ಪಕ್ಷದ ಸಂಘಟನೆಯಲ್ಲಿ ಯಾವುದೇ ಹೊಣೆಗಾರಿಕೆಯು ಇಲ್ಲದಿದ್ದ ಮುಖಂಡರನ್ನು ಗುರುತಿಸಿ, ಈಗಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಾನ ನೀಡಿರುವುದು ಗಮನಾರ್ಹವಾಗಿದೆ.
ಹೊಸದಾಗಿ ಹೊಣೆಗಾರಿಕೆ ಪಡೆದವರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ವಿಜಯ್ ರೂಪಾಣಿ, ಬಿಪ್ಲಾಪ್ ಕುಮಾರ್ ದೇವ್, ಮಾಜಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಮಹೇಶ್ ಶರ್ಮಾ ಅವರು ಪ್ರಮುಖರು.
ರೂಪಾಣಿ ಅವರು ಪಂಜಾಬ್ ಮತ್ತು ಚಂಡೀಗಡದ ಉಸ್ತುವಾರಿ ಯಾಗಿದ್ದರೆ, ದೇವ್ ಅವರಿಗೆ ಹರಿಯಾಣ ಮತ್ತು ಜಾವಡೇಕರ್ ಅವರಿಗೆ ಕೇರಳದ ರಾಜ್ಯದ ಪಕ್ಷದ ಉಸ್ತುವಾರಿ ಹೊಣೆ ನೀಡಲಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರಿಗೆ ಬಿಹಾರ ರಾಜ್ಯದ ಪಕ್ಷದ ಉಸ್ತುವಾರಿ ವಹಿಸ ಲಾಗಿದೆ. ನೆರೆಯ ತೆಲಂಗಾಣ ರಾಜ್ಯದ ಪಕ್ಷದ ಸಹ ಉಸ್ತುವಾರಿ ಗಳಾಗಿ ಅರವಿಂದ್ ಮೆನನ್, ವಿಜಯ್ ರಾಹತ್ಕರ್ ನೇಮಕಗೊಂಡಿದ್ದಾರೆ. ಇವರ ಜೊತೆಗೆ ನರಿಂದರ್ ಸಿಂಗ್ ರೈನಾ (ಪಂಜಾಬ್), ಆಶಾ ಲಕ್ರಾ (ಪಶ್ಚಿಮ ಬಂಗಾಳ) ಅವರು ಸಹ ಉಸ್ತುವಾರಿಗಳಾಗಿದ್ದಾರೆ. ಬಿಜೆಪಿ ವಕ್ತಾರರಾದ ಸಂಬೀತ್ ಪಾತ್ರಾ ಪಕ್ಷದ ಪ್ರಮುಖ ಸಂಘಟನಾತ್ಮಕ ಹೊಣೆಗಾರಿಕೆಯನ್ನು ನೀಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.