<p class="title"><strong>ಭೋಪಾಲ್:</strong> ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾನುವಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ನಿಷ್ಠರಾಗಿದ್ದ ಇಬ್ಬರು ಶಾಸಕರಿಗೆ ಸ್ಥಾನಕಲ್ಪಿಸಿದ್ದಾರೆ.</p>.<p class="title">ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ನೂತನ ಸಚಿವರಾದ ತುಳಸಿರಾಂ ಸಿಲಾವತ್ ಮತ್ತು ಗೋವಿಂದ್ ರಾಜಪೂತ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಸೇರಿ ಹಲವು ಮುಖಂಡರು ಹಾಜರಿದ್ದರು.</p>.<p class="title">ಈ ಇಬ್ಬರು ಸೇರಿದಂತೆ 15 ಮಂದಿ ಕಾಂಗ್ರೆಸ್ ಪಕ್ಷದಿಂದ ನಿರ್ಗಮಿಸಿದ್ದರಿಂದ ಹಿಂದಿನ, ಕಮಲನಾಥ್ ನೇತೃತ್ವದ ಸರ್ಕಾರ ಪದಚ್ಯುತಿಗೊಂಡಿತ್ತು.ಮಾರ್ಚ್ 2020ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಚೌಹಾಣ್ ಮೂರನೇ ಬಾರಿ ಸಂಪುಟ ವಿಸ್ತರಿಸಿದ್ದಾರೆ.</p>.<p>ಸಿಲಾವತ್ ಮತ್ತು ರಾಜಪೂತ್ ಇಬ್ಬರೂ ಕಳೆದ ಏಪ್ರಿಲ್ನಲ್ಲಿ ನಡೆದಿದ್ದ ವಿಸ್ತರಣೆಯಲ್ಲಿ ಸಂಪುಟ ಸೇರಿದ್ದರು. ಆದರೆ, ಶಾಸನಸಭೆ ಸದಸ್ಯರಾಗಿಲ್ಲದಿದ್ದ ಕಾರಣಕ್ಕೆ ಅಕ್ಟೋಬರ್ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು.</p>.<p>ಶಾಸನಸಭೆಯ ಸದಸ್ಯರಲ್ಲದವರೂ ಸಂಪುಟ ಸೇರಿದ್ದು, ಆರು ತಿಂಗಳ ಅವಧಿಯಲ್ಲಿ ಶಾಸನಸಭೆಗೆ ಆಯ್ಕೆ ಆಗಬೇಕು ಎಂಬುದು ನಿಯಮ. ಈ ಹಿಂದದೆ ಜುಲೈ 2 ಮತ್ತು ಅದಕ್ಕೂ ಹಿಂದೆ ಏಪ್ರಿಲ್ 21ರಲ್ಲಿ ಚೌಹಾಣ್ ಅವರು ಸಂಪುಟ ವಿಸ್ತರಿಸಿದ್ದರು. ನ 3ರಂದು 28 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ 19 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಭೋಪಾಲ್:</strong> ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾನುವಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ನಿಷ್ಠರಾಗಿದ್ದ ಇಬ್ಬರು ಶಾಸಕರಿಗೆ ಸ್ಥಾನಕಲ್ಪಿಸಿದ್ದಾರೆ.</p>.<p class="title">ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ನೂತನ ಸಚಿವರಾದ ತುಳಸಿರಾಂ ಸಿಲಾವತ್ ಮತ್ತು ಗೋವಿಂದ್ ರಾಜಪೂತ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಸೇರಿ ಹಲವು ಮುಖಂಡರು ಹಾಜರಿದ್ದರು.</p>.<p class="title">ಈ ಇಬ್ಬರು ಸೇರಿದಂತೆ 15 ಮಂದಿ ಕಾಂಗ್ರೆಸ್ ಪಕ್ಷದಿಂದ ನಿರ್ಗಮಿಸಿದ್ದರಿಂದ ಹಿಂದಿನ, ಕಮಲನಾಥ್ ನೇತೃತ್ವದ ಸರ್ಕಾರ ಪದಚ್ಯುತಿಗೊಂಡಿತ್ತು.ಮಾರ್ಚ್ 2020ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಚೌಹಾಣ್ ಮೂರನೇ ಬಾರಿ ಸಂಪುಟ ವಿಸ್ತರಿಸಿದ್ದಾರೆ.</p>.<p>ಸಿಲಾವತ್ ಮತ್ತು ರಾಜಪೂತ್ ಇಬ್ಬರೂ ಕಳೆದ ಏಪ್ರಿಲ್ನಲ್ಲಿ ನಡೆದಿದ್ದ ವಿಸ್ತರಣೆಯಲ್ಲಿ ಸಂಪುಟ ಸೇರಿದ್ದರು. ಆದರೆ, ಶಾಸನಸಭೆ ಸದಸ್ಯರಾಗಿಲ್ಲದಿದ್ದ ಕಾರಣಕ್ಕೆ ಅಕ್ಟೋಬರ್ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು.</p>.<p>ಶಾಸನಸಭೆಯ ಸದಸ್ಯರಲ್ಲದವರೂ ಸಂಪುಟ ಸೇರಿದ್ದು, ಆರು ತಿಂಗಳ ಅವಧಿಯಲ್ಲಿ ಶಾಸನಸಭೆಗೆ ಆಯ್ಕೆ ಆಗಬೇಕು ಎಂಬುದು ನಿಯಮ. ಈ ಹಿಂದದೆ ಜುಲೈ 2 ಮತ್ತು ಅದಕ್ಕೂ ಹಿಂದೆ ಏಪ್ರಿಲ್ 21ರಲ್ಲಿ ಚೌಹಾಣ್ ಅವರು ಸಂಪುಟ ವಿಸ್ತರಿಸಿದ್ದರು. ನ 3ರಂದು 28 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ 19 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>