ಗುರುವಾರ ಮಧ್ಯಾಹ್ನ ರಾಜ್ಯಸಭಾ ಕಲಾಪದ ಮಧ್ಯೆಯೇ ಖರ್ಗೆ ಅವರು, ಹೆರಾಲ್ಡ್ ಹೌಸ್ ಕಟ್ಟಡಕ್ಕೆ ಬಂದರು. ಆನಂತರ ಇ.ಡಿ ಅಧಿಕಾರಿಗಳು ಯಂಗ್ ಇಂಡಿಯನ್ ಕಚೇರಿಯ ಬೀಗ ತೆಗೆದು, ಶೋಧಕಾರ್ಯಕ್ಕೆ ಮತ್ತೆ ಚಾಲನೆ ನೀಡಿದರು. ‘ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಸಾಕ್ಷ್ಯಗಳು ಲಭ್ಯವಾಗುತ್ತವೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ಸಾಕ್ಷ್ಯಗಳನ್ನು ಸಂಗ್ರಹಿಸುತ್ತೇವೆ’ ಎಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ.