‘ಸ್ಕಾಕ್ರಿಲೇಜ್ ಪ್ರಕರಣಗಳಲ್ಲಿ ನ್ಯಾಯ ಸಿಗಬೇಕು ಮತ್ತು ಡ್ರಗ್ ವ್ಯವಹಾರದಲ್ಲಿ ಶಾಮೀಲಾದವರನ್ನು ಬಧಿಸಬೇಕು ಎಂಬ ಒತ್ತಾಯದ ಕಾರಣಕ್ಕೇ 2017ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಜನರು ಆರಿಸಿದರು. ಆದರೆ ತಮ್ಮ ಕರ್ತವ್ಯದಲ್ಲಿ ಮುಖ್ಯಮಂತ್ರಿ ವಿಫಲರಾದುದರಿಂದ ಮುಖ್ಯಮಂತ್ರಿಯನ್ನು ಜನರು ತೆಗೆದು ಹಾಕಿದರು. ಈಗಿನ ಎಜಿ ಮತ್ತು ಡಿಜಿಪಿ ನೇಮಕಾತಿಗಳು ಸಂತ್ರಸ್ತರ ಗಾಯಗಳ ಮೇಲೆ ಉಪ್ಪು ಸುರಿದಂತಾಗುತ್ತದೆ. ಆದ್ದರಿಂದ ಈ ನಿರ್ಧಾರಗಳನ್ನು ಬದಲಿಸಬೇಕು. ಇಲ್ಲದಿದ್ದರೆ ನಮಗೆ ಮುಖ ತೋರಿಸಲು ಆಗುವುದಿಲ್ಲ’ ಎಂದು ಅವರು ಟ್ವೀಟ್ ಮಾಡಿದ್ದಾರೆ.