ಕನ್ವರ್ ಯಾತ್ರೆ ಕುರಿತು ಪ್ರಕಟಗೊಂಡಿರುವ ವರದಿಗಳನ್ನು ಪ್ರಸ್ತಾಪಿಸಿದ ಅವರು, ‘ಸಾರ್ವಜನಿಕ ಪ್ರದೇಶದಲ್ಲಿ ಕೆಲವೇ ನಿಮಿಷಗಳ ಕಾಲ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರೆ, ಅದು ದೊಡ್ಡ ವಿವಾದವಾಗುತ್ತದೆ. ಮುಸ್ಲಿಮರು ಪೊಲೀಸರ ಗುಂಡುಗಳನ್ನು ಎದುರಿಸಬೇಕಾಗುತ್ತದೆ, ಕಸ್ಟಡಿಯಲ್ಲಿರಬೇಕಾಗುತ್ತದೆ. ಎನ್ಎಸ್ಎ, ಯುಎಪಿಎ ಅಡಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಹತ್ಯೆ, ಬುಲ್ಡೋಜರ್ಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.