ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿಯ ಹಿರಿಯ ಮುಖಂಡ ರವಿಶಂಕರ್ ಪ್ರಸಾದ್, ಈ ಸುದ್ದಿ ಪ್ರಕಟಿಸಿದವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದರು. ಭಾರತದಲ್ಲಿ ಈ ಸುದ್ಧಿಯನ್ನು ಬ್ರೇಕ್ ಮಾಡಿದ ಸುದ್ದಿ ಪೋರ್ಟಲ್ ‘ದಿ ವೈರ್’ ಈ ಹಿಂದೆ ಹಲವು ತಪ್ಪು ಸುದ್ದಿಗಳನ್ನು ನೀಡಿದ ಇತಿಹಾಸವಿದೆ ಎಂದು ಟೀಕಿಸಿದ್ದಾರೆ.