‘ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆ, ಪ್ರತ್ಯೇಕತಾವಾದ, ಗುಂಡಿನ ದಾಳಿಯಂತಹ ಕೃತ್ಯಗಳನ್ನು ಕಾಶ್ಮೀರದ ಜನತೆ ತಿರಸ್ಕರಿಸಿದ್ದಾರೆ. ಭದ್ರತಾ ಪಡೆಗಳ ಹಾಗೂ ಕಾಶ್ಮೀರದ ಜನರ ನಿರಂತರ ಪರಿಶ್ರಮದಿಂದ ಕಲ್ಲುತೂರಾಟ, ಪ್ರತಿಭಟನೆಯಂತಹ ಬೆಳವಣಿಗೆಗಳು ಕಡಿಮೆಯಾಗಿದೆ. ಇದೆಲ್ಲದರ ಪರಿಣಾಮ ಉಗ್ರರ ಸಂಖ್ಯೆಯೂ 200ಕ್ಕಿಂತ ಕಡಿಮೆಯಾಗಿದೆ. ಇದು ಭದ್ರತಾ ಪಡೆಗಳ ಬಹುದೊಡ್ಡ ಸಾಧನೆ. ಈ ನಿಟ್ಟಿನಲ್ಲಿ ಸ್ಥಳೀಯ ಪೊಲೀಸ್, ಸಿಆರ್ಪಿಎಫ್ ಯೋಧರ ಕಾರ್ಯ ಅಭಿನಂದನೀಯ’ ಎಂದು ಬಣ್ಣಿಸಿದರು.