ಮುಂಬೈ: ದೇವಾಲಯಗಳನ್ನು ತೆರೆಯುವ ವಿಚಾರದಲ್ಲಿ ರಾಜ್ಯಪಾಲ ಭಗತ್ಸಿಂಗ್ ಕೋಶಿಯಾರಿ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವಿನ ಪತ್ರ ವ್ಯವಹಾರದ ಸುತ್ತಲಿನ ಬೆಳವಣಿಗೆಗಳನ್ನು ಉಲ್ಲೇಖಿಸಿ ಮಾತನಾಡಿದ ಎನ್ಸಿಪಿ ಮುಖಂಡ ಶರದ್ ಪವಾರ್, ’ಸ್ವಾಭಿಮಾನ, ಆತ್ಮಗೌರವವಿರುವರು ಯಾರೂ ಆ ಹುದ್ದೆಯಲ್ಲಿ (ರಾಜ್ಯಪಾಲ) ಮುಂದುವರಿಯುತ್ತಿರಲಿಲ್ಲ’ ಎಂದು ಹೇಳಿದರು.