<p><strong>ಮುಂಬೈ</strong>: ‘ಪೆಗಾಸಸ್ ಸಾಫ್ಟ್ವೇರ್ ಮೂಲಕ ಪತ್ರಕರ್ತರು ಮತ್ತು ರಾಜಕಾರಣಿಗಳು ಸೇರಿದಂತೆ ದೇಶದ ವಿವಿಧ ವರ್ಗಗಳ ಜನರ ಮೇಲೆ ಕಣ್ಗಾವಲು ನಡೆಸಲು ಹಣ ನೀಡಿದ್ದು ಯಾರು ಎನ್ನುವುದು ಬಹಿರಂಗವಾಗುವುದು ಅಗತ್ಯವಿದೆ’ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಒತ್ತಾಯಿಸಿದ್ದಾರೆ.</p>.<p>ಶಿವಸೇನಾದ ಮುಖವಾಣಿ ‘ಸಾಮ್ನಾ’ದಲ್ಲಿನ ವಾರದ ಅಂಕಣ ‘ರೋಖ್ಠೋಕ್’ನಲ್ಲಿ ಪೆಗಾಸಸ್ ಗೂಢಚರ್ಚೆಯನ್ನು ಹಿರೋಶಿಮಾ ಬಾಂಬ್ಗೆ ಹೋಲಿಸಿ ಅವರು ವಿಶ್ಲೇಷಣೆ ಮಾಡಿದ್ದಾರೆ.</p>.<p>‘ಜಪಾನ್ನ ಹಿರೋಶಿಮಾ ನಗರದ ಮೇಲೆ ನಡೆದ ಬಾಂಬ್ ದಾಳಿಯಿಂದ ಸಾವಿರಾರು ಜನರು ಸಾವಿಗೀಡಾದರು. ಆದರೆ, ಈಗ ನಡೆಯುತ್ತಿರುವ ಗೂಢಚರ್ಯೆಯಿಂದ ಸ್ವಾತಂತ್ರ್ಯದ ಸಾವು ಸಂಭವಿಸುತ್ತಿದೆ. ಆಧುನಿಕ ತಂತ್ರಜ್ಞಾನ ನಮ್ಮನ್ನು ಗುಲಾಮಗಿರಿಯತ್ತ ಕೊಂಡೊಯ್ಯುತ್ತಿದೆ’ ಎಂದು ರಾವುತ್ ಹೇಳಿದ್ದಾರೆ.</p>.<p>‘ಪೆಗಾಸಸ್ ಸಾಫ್ಟ್ವೇರ್ಗೆ ಇಸ್ರೇಲಿ ಕಂಪನಿ ಎನ್ಎಸ್ಒ ವಾರ್ಷಿಕ ₹60 ಕೋಟಿಯನ್ನು ಲೈಸನ್ಸ್ ಶುಲ್ಕವಾಗಿ ಪಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ಲೈಸನ್ಸ್ನಿಂದ 50 ದೂರವಾಣಿಗಳನ್ನು ಹ್ಯಾಕ್ ಮಾಡಬಹುದು. 300 ದೂರವಾಣಿಗಳಿಗೆ ಆರರಿಂದ ಏಳು ಲೈಸನ್ಸ್ಗಳು ಅಗತ್ಯ. ಆದ್ದರಿಂದ, ಅಪಾರ ಮೊತ್ತವನ್ನು ಗೂಢಚರ್ಯೆಗಾಗಿ ಖರ್ಚು ಮಾಡಲಾಗಿದೆಯೇ ಮತ್ತು ಈ ಮೊತ್ತವನ್ನು ಪಾವತಿಸಿದ್ದು ಯಾರು’ ಎಂದು ಅವರು ಪ್ರಶ್ನಿಸಿದ್ದಾರೆ.</p>.<p>‘ಸರ್ಕಾರಗಳಿಗೆ ಮಾತ್ರ ಈ ಸಾಫ್ಟ್ವೇರ್ ಮಾರಾಟ ಮಾಡಲಾಗುತ್ತಿದೆ ಎಂದು ಎನ್ಎಸ್ಒ ತಿಳಿಸಿದೆ. ಹೀಗಾದರೆ, ಭಾರತದಲ್ಲಿನ ಯಾವ ಸರ್ಕಾರ ಈ ಸಾಫ್ಟ್ವೇರ್ ಅನ್ನು ಖರೀದಿಸಿತ್ತು. ಭಾರತದಲ್ಲಿನ 300 ಮಂದಿ ಮೇಲೆ ಗೂಢಚರ್ಯೆ ನಡೆಸಲು ₹300 ಕೋಟಿ ಖರ್ಚು ಮಾಡಲಾಗಿದೆಯೇ? ಗೂಢಚರ್ಚೆ ನಡೆಸಲು ಇಷ್ಟೊಂದು ಅಪಾರ ಮೊತ್ತ ಖರ್ಚು ಮಾಡುವ ಸಾಮರ್ಥ್ಯ ನಮ್ಮ ದೇಶಕ್ಕೆ ಇದೆಯೇ?’ ಎಂದು ರಾವುತ್ ಪ್ರಶ್ನಿಸಿದ್ದಾರೆ.</p>.<p>‘ಮೋದಿ ಸರ್ಕಾರವನ್ನು ಟೀಕಿಸುವ ಪತ್ರಕರ್ತರ ಮೇಲೆ ಗೂಢಚರ್ಯೆ ನಡೆಸಲಾಗಿದೆ. ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಅವರೇ ಗೂಢಚರ್ಯೆವನ್ನು ಸಮರ್ಥಿಸಿಕೊಂಡಿದ್ದಾರೆ. ಜಗತ್ತಿನ 45 ದೇಶಗಳು ಪೆಗಾಸಸ್ ಬಳಸುತ್ತಿವೆ ಎನ್ನುವುದನ್ನು ವಿವರಿಸಿದ್ದಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ‘ಪೆಗಾಸಸ್ ಸಾಫ್ಟ್ವೇರ್ ಮೂಲಕ ಪತ್ರಕರ್ತರು ಮತ್ತು ರಾಜಕಾರಣಿಗಳು ಸೇರಿದಂತೆ ದೇಶದ ವಿವಿಧ ವರ್ಗಗಳ ಜನರ ಮೇಲೆ ಕಣ್ಗಾವಲು ನಡೆಸಲು ಹಣ ನೀಡಿದ್ದು ಯಾರು ಎನ್ನುವುದು ಬಹಿರಂಗವಾಗುವುದು ಅಗತ್ಯವಿದೆ’ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಒತ್ತಾಯಿಸಿದ್ದಾರೆ.</p>.<p>ಶಿವಸೇನಾದ ಮುಖವಾಣಿ ‘ಸಾಮ್ನಾ’ದಲ್ಲಿನ ವಾರದ ಅಂಕಣ ‘ರೋಖ್ಠೋಕ್’ನಲ್ಲಿ ಪೆಗಾಸಸ್ ಗೂಢಚರ್ಚೆಯನ್ನು ಹಿರೋಶಿಮಾ ಬಾಂಬ್ಗೆ ಹೋಲಿಸಿ ಅವರು ವಿಶ್ಲೇಷಣೆ ಮಾಡಿದ್ದಾರೆ.</p>.<p>‘ಜಪಾನ್ನ ಹಿರೋಶಿಮಾ ನಗರದ ಮೇಲೆ ನಡೆದ ಬಾಂಬ್ ದಾಳಿಯಿಂದ ಸಾವಿರಾರು ಜನರು ಸಾವಿಗೀಡಾದರು. ಆದರೆ, ಈಗ ನಡೆಯುತ್ತಿರುವ ಗೂಢಚರ್ಯೆಯಿಂದ ಸ್ವಾತಂತ್ರ್ಯದ ಸಾವು ಸಂಭವಿಸುತ್ತಿದೆ. ಆಧುನಿಕ ತಂತ್ರಜ್ಞಾನ ನಮ್ಮನ್ನು ಗುಲಾಮಗಿರಿಯತ್ತ ಕೊಂಡೊಯ್ಯುತ್ತಿದೆ’ ಎಂದು ರಾವುತ್ ಹೇಳಿದ್ದಾರೆ.</p>.<p>‘ಪೆಗಾಸಸ್ ಸಾಫ್ಟ್ವೇರ್ಗೆ ಇಸ್ರೇಲಿ ಕಂಪನಿ ಎನ್ಎಸ್ಒ ವಾರ್ಷಿಕ ₹60 ಕೋಟಿಯನ್ನು ಲೈಸನ್ಸ್ ಶುಲ್ಕವಾಗಿ ಪಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ಲೈಸನ್ಸ್ನಿಂದ 50 ದೂರವಾಣಿಗಳನ್ನು ಹ್ಯಾಕ್ ಮಾಡಬಹುದು. 300 ದೂರವಾಣಿಗಳಿಗೆ ಆರರಿಂದ ಏಳು ಲೈಸನ್ಸ್ಗಳು ಅಗತ್ಯ. ಆದ್ದರಿಂದ, ಅಪಾರ ಮೊತ್ತವನ್ನು ಗೂಢಚರ್ಯೆಗಾಗಿ ಖರ್ಚು ಮಾಡಲಾಗಿದೆಯೇ ಮತ್ತು ಈ ಮೊತ್ತವನ್ನು ಪಾವತಿಸಿದ್ದು ಯಾರು’ ಎಂದು ಅವರು ಪ್ರಶ್ನಿಸಿದ್ದಾರೆ.</p>.<p>‘ಸರ್ಕಾರಗಳಿಗೆ ಮಾತ್ರ ಈ ಸಾಫ್ಟ್ವೇರ್ ಮಾರಾಟ ಮಾಡಲಾಗುತ್ತಿದೆ ಎಂದು ಎನ್ಎಸ್ಒ ತಿಳಿಸಿದೆ. ಹೀಗಾದರೆ, ಭಾರತದಲ್ಲಿನ ಯಾವ ಸರ್ಕಾರ ಈ ಸಾಫ್ಟ್ವೇರ್ ಅನ್ನು ಖರೀದಿಸಿತ್ತು. ಭಾರತದಲ್ಲಿನ 300 ಮಂದಿ ಮೇಲೆ ಗೂಢಚರ್ಯೆ ನಡೆಸಲು ₹300 ಕೋಟಿ ಖರ್ಚು ಮಾಡಲಾಗಿದೆಯೇ? ಗೂಢಚರ್ಚೆ ನಡೆಸಲು ಇಷ್ಟೊಂದು ಅಪಾರ ಮೊತ್ತ ಖರ್ಚು ಮಾಡುವ ಸಾಮರ್ಥ್ಯ ನಮ್ಮ ದೇಶಕ್ಕೆ ಇದೆಯೇ?’ ಎಂದು ರಾವುತ್ ಪ್ರಶ್ನಿಸಿದ್ದಾರೆ.</p>.<p>‘ಮೋದಿ ಸರ್ಕಾರವನ್ನು ಟೀಕಿಸುವ ಪತ್ರಕರ್ತರ ಮೇಲೆ ಗೂಢಚರ್ಯೆ ನಡೆಸಲಾಗಿದೆ. ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಅವರೇ ಗೂಢಚರ್ಯೆವನ್ನು ಸಮರ್ಥಿಸಿಕೊಂಡಿದ್ದಾರೆ. ಜಗತ್ತಿನ 45 ದೇಶಗಳು ಪೆಗಾಸಸ್ ಬಳಸುತ್ತಿವೆ ಎನ್ನುವುದನ್ನು ವಿವರಿಸಿದ್ದಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>