2019ರಲ್ಲಿ ಕುಂಭಮೇಳದಲ್ಲಿ ಸ್ವಚ್ಛತೆಯಲ್ಲಿ ತೊಡಗಿದ್ದ ಕಾರ್ಮಿಕರ ಕಲ್ಯಾಣಕ್ಕಾಗಿ ಮೋದಿಯವರು ತಮ್ಮ ಉಳಿತಾಯದ ಹಣದಿಂದ ₹21 ಲಕ್ಷ ನೀಡಿದ್ದರು. ಇದೇ ವರ್ಷದಲ್ಲಿ ದಕ್ಷಿಣ ಕೋರಿಯಾ ಸರ್ಕಾರ ‘ಸಿಯೋಲ್ ಪ್ರೈಜ್‘ ಪುರಸ್ಕಾರದ ಜತೆಗೆ ₹1.30 ಕೋಟಿ ನಗದನ್ನು ಪ್ರಧಾನಿ ಅವರಿಗೆ ನೀಡಿತ್ತು. ‘ಈ ಪುರಸ್ಕಾರದ ಪೂರ್ಣ ಹಣವನ್ನು ನಮಾಮಿ ಗಂಗಾ ಯೋಜನೆಗೆ ನೀಡುತ್ತಿದ್ದೇನೆ‘ ಎಂದು ಪ್ರಧಾನಿಯವರು ಘೋಷಿಸಿದ್ದರು.