‘ಇಂದು ವಿಶ್ವ ನದಿ ದಿನ. ಎಲ್ಲರ ಸಹಕಾರದೊಂದಿಗೆ ನೀರಿನ ಮಾಲಿನ್ಯ ತಡೆಗಟ್ಟಬೇಕಿದೆ. ತಮಿಳುನಾಡಿನ ನಾಗಾ ನದಿಯನ್ನು ಸ್ಥಳೀಯರು ಪುನರುಜ್ಜೀವನಗೊಳಿಸಿದ್ದಾರೆ. ಸಬರಮತಿ ನದಿಯನ್ನು ಶುಷ್ಕ ವಾತಾವರಣದಿಂದ ಪುನರುಜ್ಜೀವನಗೊಳಿಸಲಾಗಿದೆ. ನದಿಗಳನ್ನು ಪುನಶ್ಚೇತನಗೊಳಿಸಲು ಸಾಕಷ್ಟು ಕೆಲಸ ಮಾಡಲಾಗುತ್ತಿದೆ’ ಎಂದು ಮೋದಿ ಹೇಳಿದ್ದಾರೆ.
ಎಲ್ಲರೂ ವರ್ಷಕ್ಕೊಮ್ಮೆಯಾದರೂ ನದಿಗಳ ದಿನ ಆಚರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಮಹಾತ್ಮ ಗಾಂಧಿಯವರು ಸ್ವಚ್ಛತಾ ಅಭಿಯಾನ ಆರಂಭಿಸಿದ್ದರು. ಆರ್ಥಿಕ ಸ್ವಚ್ಛತೆಯ ಬಗ್ಗೆಯೂ ನಾವು ಗಮನಹರಿಸಬೇಕಿದೆ ಎಂದ ಮೋದಿ, ಯುಪಿಐಯಂಥ ತಂತ್ರಜ್ಞಾನಗಳ ಜನಪ್ರಿಯತೆಯನ್ನು ಉಲ್ಲೇಖಿಸಿದರು.
ಜಾರ್ಖಂಡ್ನಲ್ಲಿ ಮಹಿಳೆಯರು ನಡೆಸುತ್ತಿರುವ ಅಲೋವೆರಾ ಕೃಷಿ ಬಗ್ಗೆ ಮತ್ತು ಅವರ ಬಳಿಯಿಂದ ಸ್ಯಾನಿಟೈಸರ್ ಕಂಪನಿಗಳು ಖರೀದಿ ಮಾಡುತ್ತಿರುವುದರ ಕುರಿತು ಪ್ರಧಾನಿ ಉಲ್ಲೇಖಿಸಿದರು.