ಲಖನೌ: ಹಳೆಯ ಕಥೆಗಳಲ್ಲಿ ಬರುವ ಕೋಪಿಷ್ಠ ರಾಜನಂತೆ ಪ್ರಧಾನಿ ನರೇಂದ್ರ ಮೋದಿ. ಅವರೊಬ್ಬ ‘ಅಹಂಕಾರಿ ರಾಜ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಮುಜಾಫರ್ನಗರದಲ್ಲಿ ನಡೆದ ‘ಕಿಸಾನ್ ಮಹಾಪಂಚಾಯತ್’ ಉದ್ದೇಶಿಸಿ ಮಾತನಾಡಿದ ಅವರು, ‘ದೇಶ ಕಾಯುವ ಯೋಧ ಕೂಡ ರೈತನ ಮಗ ಎಂಬುದನ್ನು ಅರ್ಥಮಾಡಿಕೊಳ್ಳಲು ಮೋದಿಯವರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.
‘ನಿಮ್ಮ ಹಕ್ಕುಗಳು ಕೊನೆಯಾಗಲಿವೆ. ಇಡೀ ದೇಶವನ್ನು ಇಬ್ಬರು–ಮೂವರು ಸ್ನೇಹಿತರಿಗೆ ಮಾರಾಟ ಮಾಡಿದ ರೀತಿಯಲ್ಲೇ ಅವರು ನಿಮ್ಮನ್ನೂ ನಿಮ್ಮ ಭೂಮಿಯನ್ನೂ ನಿಮ್ಮ ಗಳಿಕೆಯನ್ನೂ ಕೋಟ್ಯಧಿಪತಿ ಗೆಳೆಯರಿಗೆ ಮಾರಾಟ ಮಾಡಲಿದ್ದಾರೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.