ನವದೆಹಲಿ: ಯುಗಾದಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಆಯಾ ಭಾಷೆಗಳಲ್ಲೇ ಶುಭಾಶಯ ಕೋರಿದ್ದಾರೆ.
’ಯುಗಾದಿ ಹಬ್ಬದ ಶುಭಾಶಯಗಳು. ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು, ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಮೋದಿ ಅವರು ಹೇಳಿದ್ದಾರೆ.
ಎಲ್ಲರಿಗೂ ಸಂತಸದ ಯುಗಾದಿಯ ಶುಭಾಶಯ ! pic.twitter.com/SEYqoPUsHl
— Narendra Modi (@narendramodi) March 22, 2023
‘ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/VQlt3H4QoG
— Basavaraj S Bommai (@BSBommai) March 22, 2023
‘ಸುಖ-ಸಂತಸದ ಸಿಹಿ, ಕಷ್ಟ- ದುಃಖದ ಕಹಿ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯಬೇಕೆನ್ನುವ ಜೀವನ ಸಂದೇಶ ಸಾರುವ ಯುಗಾದಿ ಹಬ್ಬ, ನಾಡಿನಲ್ಲಿ ಬದಲಾವಣೆಯ ಹೊಸಪರ್ವಕ್ಕೆ ಮುನ್ನುಡಿಯಾಗಲಿ. ಯುಗಾದಿ ನಾಡಿಗೆ ಮತ್ತು ನಾಡವಾಸಿಗಳಿಗೆ ಒಳಿತನ್ನು ತರಲಿ. ಯುಗಾದಿಯ ಶುಭಾಶಯಗಳು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸುಖ-ಸಂತಸದ ಸಿಹಿ,
— Siddaramaiah (@siddaramaiah) March 22, 2023
ಕಷ್ಟ- ದುಃಖದ ಕಹಿ
ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ,
ಭರವಸೆಯೊಂದಿಗೆ ಮುನ್ನಡೆಯಬೇಕೆನ್ನುವ
ಜೀವನ ಸಂದೇಶ ಸಾರುವ ಯುಗಾದಿ ಹಬ್ಬ,
ನಾಡಿನಲ್ಲಿ
ಬದಲಾವಣೆಯ
ಹೊಸಪರ್ವಕ್ಕೆ ಮುನ್ನುಡಿಯಾಗಲಿ.
ಯುಗಾದಿ ನಾಡಿಗೆ ಮತ್ತು ನಾಡವಾಸಿಗಳಿಗೆ ಒಳಿತನ್ನು ತರಲಿ.
ಯುಗಾದಿಯ ಶುಭಾಶಯಗಳು.#yugadi pic.twitter.com/Pimu4SDOcf
‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು. ಈ ಶೋಭಕೃತ್ ಸಂವತ್ಸರವು ಸರ್ವರಿಗೂ ಶ್ರೇಯಸ್ಸು ತರಲಿ ಹಾಗೂ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಆಶಿಸುತ್ತೇನೆ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಯುಗ ಯುಗಾದಿ ಕಳೆದರೂ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 22, 2023
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ//
ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು.
ಈ ಶೋಭಕೃತ್ ಸಂವತ್ಸರವು ಸರ್ವರಿಗೂ ಶ್ರೇಯಸ್ಸು ತರಲಿ ಹಾಗೂ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಆಶಿಸುತ್ತೇನೆ.#ಯುಗಾದಿ pic.twitter.com/AEvJcJ4ts5
ಕಾಲ ಎನ್ನುವುದು ಅಖಂಡವಾದ ತತ್ತ್ವ; ನಿರಂತರವಾಗಿರುತ್ತದೆ ಅದರ ಹರಿವು. ಅದು ಸತತವಾಗಿ ಹರಿಯುತ್ತಿದ್ದರೂ ಅದರಲ್ಲಿ ಹೊಸತನಕ್ಕೇನೂ ಕೊರತೆಯಿಲ್ಲ. ಹೀಗೆ ಕಾಲದ ಅನಂತಗುಣ ಮತ್ತು ನೂತನ ಸ್ವಭಾವಗಳ ಸಂಗಮವನ್ನೇ ನಾವು ಯುಗಾದಿಯ ಆಚರಣೆಯಲ್ಲಿ ಕಾಣುವುದು.
ಯುಗಾದಿ ಎಂದರೆ ಯುಗದ ಆದಿ; ಸೃಷ್ಟಿಯ ಪ್ರಥಮ ಕ್ಷಣ; ಮೊದಲ ದಿನವೂ ಹೌದು. ಆ ಮೊದಲ ದಿನ ಪ್ರತಿವರ್ಷವೂ ಬರುತ್ತದೆ ಎಂಬುದು ವಿಶೇಷ; ಆ ಪ್ರಥಮ ಕ್ಷಣ ನಮ್ಮ ಜೀವನದುದ್ದಕ್ಕೂ ಜೊತೆಯಾಗಿರುತ್ತದೆ ಎಂಬುದು ಸ್ವಾರಸ್ಯಕರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.