ನವದೆಹಲಿ: ಮಹಾತ್ಮ ಗಾಂಧೀಜಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಮುಂದಿನ ಭಾನುವಾರ ಪ್ರಧಾನ ಮಂತ್ರಿ ಅವರ ‘ಮನದ ಮಾತು’ ಕಾರ್ಯಕ್ರಮವನ್ನು ಈ ಮೊದಲಿನ ಸಮಯ ಬೆಳಿಗ್ಗೆ 11 ಗಂಟೆ ಬದಲಿಗೆ 11.30ಕ್ಕೆ ಪ್ರಸಾರವಾಗಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಭಾನುವಾರ ಹೇಳಿದೆ.
ಈ ತಿಂಗಳ ಕೊನೆಯ ಭಾನುವಾರ ಜನವರಿ 30 ರಂದು ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯಾಗಿದೆ.
‘ಮಹಾತ್ಮ ಗಾಂಧಿ ಅವರ ಪುಣ್ಯ ತಿಥಿ ಆಚರಣೆಯ ನಂತರ ಜನವರಿ 30 ರಂದು ನಡೆಯುವ ಈ ತಿಂಗಳ ಮನದ ಮಾತು ಕಾರ್ಯಕ್ರಮವು ಬೆಳಿಗ್ಗೆ 11.30ಕ್ಕೆ ಪ್ರಾರಂಭವಾಗಲಿದೆ’ ಎಂದು ಪಿಎಂಒ ಕಚೇರಿ ಹೇಳಿದೆ.