ನವದೆಹಲಿ: ಮುಂದಿನ ತಿಂಗಳು ತೆರವಾಗಲಿರುವ ಉತ್ತರ ಪ್ರದೇಶದಲ್ಲಿನ 10, ಉತ್ತರಾಖಂಡ್ನ 1 ರಾಜ್ಯಸಭೆ ಸ್ಥಾನಗಳಿಗೆ ನವೆಂಬರ್ 9ರಂದು ಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗ ಮಂಗಳವಾರ ಈ ತೀರ್ಮಾನ ಪ್ರಕಟಿಸಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಸಮಾಜವಾದಿ ಪಕ್ಷದ ಮುಖಂಡ ರಾಮಗೋಪಾಲ್ ಯಾದವ್ ಸೇರಿದಂತೆ 10 ಸದಸ್ಯರು ನ. 25ರಂದು ನಿವೃತ್ತಿಯಾಗಲಿದ್ದಾರೆ. ಅದೇ ರೀತಿ ಉತ್ತರಾಖಂಡ್ನಿಂದ ಆಯ್ಕೆಯಾಗಿರುವ ನಟ ರಾಜ್ಬಬ್ಬರ್ ಅವರು ನಿವೃತ್ತರಾಗಲಿದ್ದಾರೆ.
ತೆರವಾಗಲಿರುವ ಈ ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿದೆ. ಮತಎಣಿಕೆಯೂ ಅದೇ ದಿನ ಸಂಜೆ ನಡೆಯಲಿದೆ. ಈ ಚುನಾವಣೆ ಕುರಿತ ಅಧಿಸೂಚನೆ ಇದೇ 20ರಂದು ಹೊರಬೀಳಲಿದೆ.