<p><strong>ನವದೆಹಲಿ:</strong> ಚಳಿಗಾಲದಲ್ಲಿ ಮಾಲಿನ್ಯ ಉಂಟುಮಾಡುವಂತಹ ದೆಹಲಿ–ಎನ್ಸಿಆರ್ ಪ್ರದೇಶದ ಪ್ರಮುಖ ಸ್ಥಳಗಳ ಮೇಲೆ ನಿಗಾ ಇಡಲು ರಚಿಸಿರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ50 ಪರಿವೀಕ್ಷಣಾ ತಂಡಗಳ ಕ್ಷೇತ್ರ ಕಾರ್ಯಾಚರಣೆಗೆಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಚಾಲನೆ ನೀಡಿದರು.</p>.<p>ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೆಹಲಿ – ಎನ್ಸಿಆರ್ ಭಾಗದಲ್ಲಿ ಉಂಟಾಗುವ ವಾಯು ಮಾಲಿನ್ಯಕ್ಕೆ ಭತ್ತ, ಗೋಧಿಯಂತಹ ಬೆಳೆಗಳ ತ್ಯಾಜ್ಯವನ್ನು ಸುಡುವುದು ಪ್ರಮುಖ ಕಾರಣವಲ್ಲ. ಇದರ ಜತೆಗೆ ಹಲವು ಕಾರಣಗಳಿವೆ’ ಎಂದು ಜಾವಡೇಕರ್ ಸ್ಪಷ್ಟಪಡಿಸಿದರು.</p>.<p>‘ಬೆಳೆಯ ತ್ಯಾಜ್ಯ ಸುಡುವುದರಿಂದ ಶೇ 4ರಷ್ಟು ಮಾತ್ರ ವಾಯುಮಾಲಿನ್ಯ ಉಂಟಾಗುತ್ತಿದೆ. ಉಳಿದ ಶೇ 96ರಷ್ಟು ಮಾಲಿನ್ಯ ಸ್ಥಳೀಯ ಕಾರ್ಖಾನೆಗಳು ಸುಡುವ ಬಯೋಮಾಸ್(ಜೀವರಾಶಿ), ಕಸ ಸುರಿಯುವುದು, ರಸ್ತೆಗಳ ನಿರ್ಮಾಣ, ದೂಳು, ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಂದ ಉಂಟಾಗುತ್ತಿದೆ’ ಎಂದರು.</p>.<p>ಇತ್ತೀಚೆಗೆ ಪಂಜಾಬ್ನ ಲೂಧಿಯಾನಕ್ಕೆ ಭೇಟಿ ನೀಡಿದ್ದಾಗ, ಅಲ್ಲಿ ಬೆಳೆ ತ್ಯಾಜ್ಯ ಸುಡುತ್ತಿದ್ದ ಹೊಗೆಯಿಂದ ನನ್ನ ಗಂಟಲು ಕಟ್ಟಿ, ಉಸಿರುಗಟ್ಟಿದ್ದೆ ಎಂದು ಜಾವಡೇಕರ್ ನೆನಪಿಸಿಕೊಂಡರು. ’ಪಂಜಾಬ್ ಸರ್ಕಾರ ಈ ಬೆಳೆಯ ತ್ಯಾಜ್ಯವನ್ನು ಸುಡದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ಹೇಳಿದರು.</p>.<p>ಇದಕ್ಕೂ ಮುನ್ನ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡಗಳ ನೋಡಲ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ’ಮಾಲಿನ್ಯ ಉಂಟುಮಾಡುವ ಪ್ರದೇಶಗಳಲ್ಲಿನೀವು ಮುಂದಿನ ಎರಡು ತಿಂಗಳು ಕೆಲಸ ಮಾಡುತ್ತೀರಿ. ಈ ಅವಧಿಯಲ್ಲಿ ಎಲ್ಲಾ ಚಟುವಟಿಕೆಗಳು ಮತ್ತು ದೂರುಗಳನ್ನು ಗಮನಿಸಿ. ಅವುಗಳಲ್ಲಿರುವ ಅಂಶಗಳನ್ನು ಪರಿವೀಕ್ಷಿಸಿ, ವರದಿ ಸಲ್ಲಿಸಿ. ತಪ್ಪಾಗಿದೆ ಎಂದು ಕಂಡು ಬಂದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನಿಮಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಚಳಿಗಾಲದಲ್ಲಿ ಮಾಲಿನ್ಯ ಉಂಟುಮಾಡುವಂತಹ ದೆಹಲಿ–ಎನ್ಸಿಆರ್ ಪ್ರದೇಶದ ಪ್ರಮುಖ ಸ್ಥಳಗಳ ಮೇಲೆ ನಿಗಾ ಇಡಲು ರಚಿಸಿರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ50 ಪರಿವೀಕ್ಷಣಾ ತಂಡಗಳ ಕ್ಷೇತ್ರ ಕಾರ್ಯಾಚರಣೆಗೆಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಚಾಲನೆ ನೀಡಿದರು.</p>.<p>ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೆಹಲಿ – ಎನ್ಸಿಆರ್ ಭಾಗದಲ್ಲಿ ಉಂಟಾಗುವ ವಾಯು ಮಾಲಿನ್ಯಕ್ಕೆ ಭತ್ತ, ಗೋಧಿಯಂತಹ ಬೆಳೆಗಳ ತ್ಯಾಜ್ಯವನ್ನು ಸುಡುವುದು ಪ್ರಮುಖ ಕಾರಣವಲ್ಲ. ಇದರ ಜತೆಗೆ ಹಲವು ಕಾರಣಗಳಿವೆ’ ಎಂದು ಜಾವಡೇಕರ್ ಸ್ಪಷ್ಟಪಡಿಸಿದರು.</p>.<p>‘ಬೆಳೆಯ ತ್ಯಾಜ್ಯ ಸುಡುವುದರಿಂದ ಶೇ 4ರಷ್ಟು ಮಾತ್ರ ವಾಯುಮಾಲಿನ್ಯ ಉಂಟಾಗುತ್ತಿದೆ. ಉಳಿದ ಶೇ 96ರಷ್ಟು ಮಾಲಿನ್ಯ ಸ್ಥಳೀಯ ಕಾರ್ಖಾನೆಗಳು ಸುಡುವ ಬಯೋಮಾಸ್(ಜೀವರಾಶಿ), ಕಸ ಸುರಿಯುವುದು, ರಸ್ತೆಗಳ ನಿರ್ಮಾಣ, ದೂಳು, ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಂದ ಉಂಟಾಗುತ್ತಿದೆ’ ಎಂದರು.</p>.<p>ಇತ್ತೀಚೆಗೆ ಪಂಜಾಬ್ನ ಲೂಧಿಯಾನಕ್ಕೆ ಭೇಟಿ ನೀಡಿದ್ದಾಗ, ಅಲ್ಲಿ ಬೆಳೆ ತ್ಯಾಜ್ಯ ಸುಡುತ್ತಿದ್ದ ಹೊಗೆಯಿಂದ ನನ್ನ ಗಂಟಲು ಕಟ್ಟಿ, ಉಸಿರುಗಟ್ಟಿದ್ದೆ ಎಂದು ಜಾವಡೇಕರ್ ನೆನಪಿಸಿಕೊಂಡರು. ’ಪಂಜಾಬ್ ಸರ್ಕಾರ ಈ ಬೆಳೆಯ ತ್ಯಾಜ್ಯವನ್ನು ಸುಡದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ಹೇಳಿದರು.</p>.<p>ಇದಕ್ಕೂ ಮುನ್ನ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡಗಳ ನೋಡಲ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ’ಮಾಲಿನ್ಯ ಉಂಟುಮಾಡುವ ಪ್ರದೇಶಗಳಲ್ಲಿನೀವು ಮುಂದಿನ ಎರಡು ತಿಂಗಳು ಕೆಲಸ ಮಾಡುತ್ತೀರಿ. ಈ ಅವಧಿಯಲ್ಲಿ ಎಲ್ಲಾ ಚಟುವಟಿಕೆಗಳು ಮತ್ತು ದೂರುಗಳನ್ನು ಗಮನಿಸಿ. ಅವುಗಳಲ್ಲಿರುವ ಅಂಶಗಳನ್ನು ಪರಿವೀಕ್ಷಿಸಿ, ವರದಿ ಸಲ್ಲಿಸಿ. ತಪ್ಪಾಗಿದೆ ಎಂದು ಕಂಡು ಬಂದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನಿಮಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>