ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿದ ಅವರು, ‘ಅಜಂಗಡ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭ್ಯರ್ಥಿ ಶಾ ಅಲಂ ಅಲಿಯಾಸ್ ಗುಡ್ಡು ಜಮಾಲಿ ಅವರು ಅತ್ಯುತ್ತಮ ಹೋರಾಟ ಮಾಡಿದ್ದಾರೆ. ಈ ಹೋರಾಟವನ್ನು 2024ರ ಲೋಕಸಭೆ ಚುನಾವಣೆವರೆಗೆ ಮುಂದುವರಿಸಬೇಕು. ಅಲ್ಲದೆ, ಇಡೀ ಉತ್ತರ ಪ್ರದೇಶದಾದ್ಯಂತ ಮತಗಳನ್ನು ಕ್ರೋಡೀಕರಿಸಲು ಬಿಎಸ್ಪಿಯ ಹೋರಾಟ ನಿರಂತರವಾಗಿರಲಿದೆ. ಇದಕ್ಕಾಗಿ ಚುನಾವಣೆ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ತಪ್ಪು ದಾರಿಗೆ ಎಳೆಯದಂತೆ ಎಚ್ಚರವಹಿಸಬೇಕಿರುವುದು ಮುಖ್ಯವಾಗಿದೆ’ ಎಂದು ಹೇಳಿದರು.