ಪ್ರವಾದಿಯವರನ್ನು ಅವಹೇಳನ ಮಾಡಿದ ಆರೋಪಗಳ ಸಂಬಂಧ ಜಿಂದಾಲ್ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ಗಳ ರದ್ದತಿ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಲು ಪೀಠ ಅನುಮತಿಸಿತು. ಅಲ್ಲದೆ, ಭವಿಷ್ಯದಲ್ಲಿ ಈ ವಿಚಾರ ಸಂಬಂಧ ದಾಖಲಾಗುವ ಎಫ್ಐಆರ್ಗಳನ್ನೂ ತನಿಖೆಗಾಗಿ ದೆಹಲಿ ಪೊಲೀಸರಿಗೆ ವರ್ಗಾಯಿಸುವುದಾಗಿ ಪೀಠ ಹೇಳಿತು.