<p><strong>ಚಂಡೀಗಡ:</strong> ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಹಿಂದೆ ‘ಮಿಟೂ (#MeToo)’ ಆರೋಪ ಎದುರಿಸಿದ್ದರು. ಆಗ ಅವರಿಗೆ ಅದರಿಂದ ಬಚಾವಾಗಲು ನೆರವಾಗಿದ್ದಕ್ಕೆ ವಿಷಾದವಿದೆ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.</p>.<p>ಆಗ ಸಚಿವರಾಗಿದ್ದ ಚನ್ನಿ ತಮ್ಮ ಕಾಲಿಗೆರಗಿ, ಜೀವನ ಪರ್ಯಂತ ನಿಮಗೆ ನಿಷ್ಠರಾಗಿರುತ್ತೇನೆ ಎಂದು ಹೇಳಿದ್ದರು ಎಂದೂ ಅಮರಿಂದರ್ ಸಿಂಗ್ ಹೇಳಿದ್ದಾರೆ.</p>.<p>‘ಈಗ ಅವರು (ಚನ್ನಿ) ಬಣ್ಣ ಬದಲಿಸಿದ್ದಾರೆ. ಎರಡು ವರ್ಷಗಳಿಂದ ನನ್ನನ್ನು ದೂರ ಮಾಡಲು ಯತ್ನಿಸುತ್ತಿದ್ದರು ಎನ್ನುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.</p>.<p><a href="https://www.prajavani.net/india-news/uttar-pradesh-elections-obc-bjp-hindutva-rss-yogi-adityanath-904007.html" itemprop="url">UP Elections: ಒಬಿಸಿ ಪಲ್ಲಟ- ಬಿಜೆಪಿ ‘ಹಿಂದುತ್ವ’ ಆಟ </a></p>.<p>ಪ್ರಧಾನಿ ನರೇಂದ್ರ ಮೋದಿಗೆ ಉಂಟಾಗಿದ್ದ ಭದ್ರತಾ ಲೋಪ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಚನ್ನಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚನ್ನಿ ಸರ್ಕಾರದ ಸೂಚನೆಯಂತೆಯೇ ಪೊಲೀಸರು ಪ್ರತಿಭಟನಾನಿರತ ರೈತರನ್ನು ರಸ್ತೆಯಿಂದ ತೆರವುಗೊಳಿಸಿರಲಿಲ್ಲ. ಹೀಗಾಗಿ ಪ್ರಧಾನಿಯವರು ಅಲ್ಲಿ ಸಿಲುಕಿಹಾಕಿಕೊಳ್ಳುವಂತಾಗಿತ್ತು ಎಂದು ಅವರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಡ:</strong> ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಹಿಂದೆ ‘ಮಿಟೂ (#MeToo)’ ಆರೋಪ ಎದುರಿಸಿದ್ದರು. ಆಗ ಅವರಿಗೆ ಅದರಿಂದ ಬಚಾವಾಗಲು ನೆರವಾಗಿದ್ದಕ್ಕೆ ವಿಷಾದವಿದೆ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.</p>.<p>ಆಗ ಸಚಿವರಾಗಿದ್ದ ಚನ್ನಿ ತಮ್ಮ ಕಾಲಿಗೆರಗಿ, ಜೀವನ ಪರ್ಯಂತ ನಿಮಗೆ ನಿಷ್ಠರಾಗಿರುತ್ತೇನೆ ಎಂದು ಹೇಳಿದ್ದರು ಎಂದೂ ಅಮರಿಂದರ್ ಸಿಂಗ್ ಹೇಳಿದ್ದಾರೆ.</p>.<p>‘ಈಗ ಅವರು (ಚನ್ನಿ) ಬಣ್ಣ ಬದಲಿಸಿದ್ದಾರೆ. ಎರಡು ವರ್ಷಗಳಿಂದ ನನ್ನನ್ನು ದೂರ ಮಾಡಲು ಯತ್ನಿಸುತ್ತಿದ್ದರು ಎನ್ನುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.</p>.<p><a href="https://www.prajavani.net/india-news/uttar-pradesh-elections-obc-bjp-hindutva-rss-yogi-adityanath-904007.html" itemprop="url">UP Elections: ಒಬಿಸಿ ಪಲ್ಲಟ- ಬಿಜೆಪಿ ‘ಹಿಂದುತ್ವ’ ಆಟ </a></p>.<p>ಪ್ರಧಾನಿ ನರೇಂದ್ರ ಮೋದಿಗೆ ಉಂಟಾಗಿದ್ದ ಭದ್ರತಾ ಲೋಪ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಚನ್ನಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚನ್ನಿ ಸರ್ಕಾರದ ಸೂಚನೆಯಂತೆಯೇ ಪೊಲೀಸರು ಪ್ರತಿಭಟನಾನಿರತ ರೈತರನ್ನು ರಸ್ತೆಯಿಂದ ತೆರವುಗೊಳಿಸಿರಲಿಲ್ಲ. ಹೀಗಾಗಿ ಪ್ರಧಾನಿಯವರು ಅಲ್ಲಿ ಸಿಲುಕಿಹಾಕಿಕೊಳ್ಳುವಂತಾಗಿತ್ತು ಎಂದು ಅವರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>