ಚಂಡೀಗಡ:ಕೇಂದ್ರ ಸರ್ಕಾರದ ಅಲ್ಪಾವಧಿ ಗುತ್ತಿಗೆ ಸೇನಾ ನೇಮಕಾತಿ ‘ಅಗ್ನಿಪಥ’ ಯೋಜನೆಯನ್ನು ವಿರೋಧಿಸಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಗುರುವಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು.
‘ಅಗ್ನಿಪಥ ಯೋಜನೆಯನ್ನು ತಕ್ಷಣವೇ ಹಿಂಪಡೆಯಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳುವಂತೆವಿಧಾನಸಭೆಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ’ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಬಜೆಟ್ ಅಧಿವೇಶನದ ಈ ನಿರ್ಣಯ ಮಂಡಿಸಿದ ಭಗವಂತ ಮಾನ್, ‘ಕೇಂದ್ರದ ಈ ನೀತಿಯು ದೇಶದ ಶಸಸ್ತ್ರಪಡೆಯಲ್ಲಿ ಜೀವಿತಾವಧಿಗೆ ಸೇವೆ ಸಲ್ಲಿಸಲು ಬಯಸುವ ಯುವಜನರಲ್ಲಿ ಅತೃಪ್ತಿಯನ್ನು ಸೃಷ್ಟಿಸುವ ಸಾಧ್ಯತೆ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.