<p><strong>ಮುಂಬೈ: </strong>ಮುಂಬೈ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆ ಮಳೆ ಸುರಿದಿದೆ. ಹಲವು ದಿನಗಳಿಂದ ಬಿಸಿಲಿನ ಧಗೆಯಿಂದ ಬಸವಳಿದಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.</p>.<p>ಮುಂಬೈ ನಗರದಲ್ಲಿ ಸುರಿದ ವರ್ಷಧಾರೆ ಮುಂಗಾರು ಪೂರ್ವ ಸಿಂಚನ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.</p>.<p>ಮಲ್ವಾನಿ, ಬೊರಿವಿಲಿ, ದಹಿಸರ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 11ರ ಹೊತ್ತಿಗೆ 30 ಮಿ.ಮೀ.ನಷ್ಟು ಮಳೆ ಬಿದ್ದಿರುವುದು ದಾಖಲಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ (ಆರ್ಎಂಸಿ) ನಿರ್ದೇಶಕಿ ಶುಭಾಂಗಿ ಭೂತೆ ತಿಳಿಸಿದ್ದಾರೆ.</p>.<p>‘ಗುಡುಗು, ಮಿಂಚು ಇದೆ. ಮಳೆ ಬೀಳುವ ತೀವ್ರತೆಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದಾಗಿದೆ. ಇದನ್ನು ಮುಂಗಾರು ಪೂರ್ವ ಮಳೆ ಎಂಬುದಾಗಿ ಕರೆಯಬಹುದೇ ಹೊರತು ನೈರುತ್ಯ ಮುಂಗಾರಿನಿಂದಾದ ಮಳೆಯಲ್ಲ’ ಎಂದೂ ತಿಳಿಸಿದರು.</p>.<p>ಕರಾವಳಿ ಭಾಗದ ರತ್ನಗಿರಿ ಜಿಲ್ಲೆಯ ಹರ್ನಾಯ್ ಬಂದರು ಪ್ರದೇಶದಲ್ಲಿ ಮಳೆಯ ಸಿಂಚನವಾದ ಬೆನ್ನಲ್ಲೇ, ಮಹಾರಾಷ್ಟ್ರಕ್ಕೆ ಮುಂಗಾರು ಮಾರುತಗಳ ಪ್ರವೇಶವಾಗಿದ್ದನ್ನು ಐಎಂಡಿ ಶನಿವಾರವೇ ದೃಢಪಡಿಸಿತ್ತು. ಪೂರಕ ವಾತಾವರಣ ನಿರ್ಮಾಣವಾಗಿದ್ದರೂ ಮುಂಬೈನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಇನ್ನೂ ಬಿದ್ದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಮುಂಬೈ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆ ಮಳೆ ಸುರಿದಿದೆ. ಹಲವು ದಿನಗಳಿಂದ ಬಿಸಿಲಿನ ಧಗೆಯಿಂದ ಬಸವಳಿದಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.</p>.<p>ಮುಂಬೈ ನಗರದಲ್ಲಿ ಸುರಿದ ವರ್ಷಧಾರೆ ಮುಂಗಾರು ಪೂರ್ವ ಸಿಂಚನ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.</p>.<p>ಮಲ್ವಾನಿ, ಬೊರಿವಿಲಿ, ದಹಿಸರ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 11ರ ಹೊತ್ತಿಗೆ 30 ಮಿ.ಮೀ.ನಷ್ಟು ಮಳೆ ಬಿದ್ದಿರುವುದು ದಾಖಲಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ (ಆರ್ಎಂಸಿ) ನಿರ್ದೇಶಕಿ ಶುಭಾಂಗಿ ಭೂತೆ ತಿಳಿಸಿದ್ದಾರೆ.</p>.<p>‘ಗುಡುಗು, ಮಿಂಚು ಇದೆ. ಮಳೆ ಬೀಳುವ ತೀವ್ರತೆಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದಾಗಿದೆ. ಇದನ್ನು ಮುಂಗಾರು ಪೂರ್ವ ಮಳೆ ಎಂಬುದಾಗಿ ಕರೆಯಬಹುದೇ ಹೊರತು ನೈರುತ್ಯ ಮುಂಗಾರಿನಿಂದಾದ ಮಳೆಯಲ್ಲ’ ಎಂದೂ ತಿಳಿಸಿದರು.</p>.<p>ಕರಾವಳಿ ಭಾಗದ ರತ್ನಗಿರಿ ಜಿಲ್ಲೆಯ ಹರ್ನಾಯ್ ಬಂದರು ಪ್ರದೇಶದಲ್ಲಿ ಮಳೆಯ ಸಿಂಚನವಾದ ಬೆನ್ನಲ್ಲೇ, ಮಹಾರಾಷ್ಟ್ರಕ್ಕೆ ಮುಂಗಾರು ಮಾರುತಗಳ ಪ್ರವೇಶವಾಗಿದ್ದನ್ನು ಐಎಂಡಿ ಶನಿವಾರವೇ ದೃಢಪಡಿಸಿತ್ತು. ಪೂರಕ ವಾತಾವರಣ ನಿರ್ಮಾಣವಾಗಿದ್ದರೂ ಮುಂಬೈನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಇನ್ನೂ ಬಿದ್ದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>