ರಾಮ ಮಂದಿರವು ’ರಾಷ್ಟ್ರ ಮಂದಿರ’ದ ರೂಪ ಪಡೆಯಲಿದೆ. ಇದಕ್ಕಾಗಿ, ದೇಣಿಗೆ ಪಡೆಯುವ ನಿಟ್ಟಿನಲ್ಲಿ ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳನ್ನು ಶೀಘ್ರ ಆರಂಭಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ಪ್ರಸ್ತಾಪಿತ ರಾಮ ಮಂದಿರದ ಚಿತ್ರಗಳನ್ನು ದೇಶದಾದ್ಯಂತ ಎಲ್ಲರಿಗೂ ತಲುಪಿಸಲು ಪ್ರಯತ್ನಿಸಲಾಗುವುದು. ₹10, ₹100 ಮತ್ತು ₹1000 ಕೂಪನ್ಗಳ ಮೂಲಕ ರಾಮಭಕ್ತರು ಸ್ವಯಂ ಪ್ರೇರಣೆಯಿಂದ ನೀಡುವ ಹಣವನ್ನು ಸ್ವೀಕರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.