<p><strong>ನವದೆಹಲಿ: </strong>ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ದೇಶದ ಜನರಿಂದ ಸಂಗ್ರಹಿಸಲಾದ ಹಣದಿಂದಲೇ ನಿರ್ಮಿಸಲಾಗುವುದು ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಬುಧವಾರ ತಿಳಿಸಿದ್ದಾರೆ.</p>.<p>ವಿದೇಶದಿಂದ ದೇಣಿಗೆ ಪಡೆಯಲು ಅಗತ್ಯ ಅನುಮೋದನೆ ದೊರೆತಿಲ್ಲ. ಹೀಗಾಗಿ, ಸಾಮೂಹಿಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.</p>.<p>ರಾಮ ಮಂದಿರವು ’ರಾಷ್ಟ್ರ ಮಂದಿರ’ದ ರೂಪ ಪಡೆಯಲಿದೆ. ಇದಕ್ಕಾಗಿ, ದೇಣಿಗೆ ಪಡೆಯುವ ನಿಟ್ಟಿನಲ್ಲಿ ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳನ್ನು ಶೀಘ್ರ ಆರಂಭಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ಪ್ರಸ್ತಾಪಿತ ರಾಮ ಮಂದಿರದ ಚಿತ್ರಗಳನ್ನು ದೇಶದಾದ್ಯಂತ ಎಲ್ಲರಿಗೂ ತಲುಪಿಸಲು ಪ್ರಯತ್ನಿಸಲಾಗುವುದು. ₹10, ₹100 ಮತ್ತು ₹1000 ಕೂಪನ್ಗಳ ಮೂಲಕ ರಾಮಭಕ್ತರು ಸ್ವಯಂ ಪ್ರೇರಣೆಯಿಂದ ನೀಡುವ ಹಣವನ್ನು ಸ್ವೀಕರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.</p>.<p>ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ₹10 ಮುಖಬೆಲೆಯ ನಾಲ್ಕು ಕೋಟಿ ಕೂಪನ್ಗಳನ್ನು ಮುದ್ರಿಸಿದೆ. ಅದೇ ರೀತಿ ₹100 ಮುಖಬೆಲೆಯ 8 ಕೋಟಿ ಕೂಪನ್ಗಳು ಮತ್ತು ₹1000 ಮುಖಬೆಲೆಯ 12 ಲಕ್ಷ ಕೂಪನ್ಗಳನ್ನು ಮುದ್ರಿಸಲಾಗಿದೆ ಎಂದು ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ದೇಶದ ಜನರಿಂದ ಸಂಗ್ರಹಿಸಲಾದ ಹಣದಿಂದಲೇ ನಿರ್ಮಿಸಲಾಗುವುದು ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಬುಧವಾರ ತಿಳಿಸಿದ್ದಾರೆ.</p>.<p>ವಿದೇಶದಿಂದ ದೇಣಿಗೆ ಪಡೆಯಲು ಅಗತ್ಯ ಅನುಮೋದನೆ ದೊರೆತಿಲ್ಲ. ಹೀಗಾಗಿ, ಸಾಮೂಹಿಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.</p>.<p>ರಾಮ ಮಂದಿರವು ’ರಾಷ್ಟ್ರ ಮಂದಿರ’ದ ರೂಪ ಪಡೆಯಲಿದೆ. ಇದಕ್ಕಾಗಿ, ದೇಣಿಗೆ ಪಡೆಯುವ ನಿಟ್ಟಿನಲ್ಲಿ ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳನ್ನು ಶೀಘ್ರ ಆರಂಭಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ಪ್ರಸ್ತಾಪಿತ ರಾಮ ಮಂದಿರದ ಚಿತ್ರಗಳನ್ನು ದೇಶದಾದ್ಯಂತ ಎಲ್ಲರಿಗೂ ತಲುಪಿಸಲು ಪ್ರಯತ್ನಿಸಲಾಗುವುದು. ₹10, ₹100 ಮತ್ತು ₹1000 ಕೂಪನ್ಗಳ ಮೂಲಕ ರಾಮಭಕ್ತರು ಸ್ವಯಂ ಪ್ರೇರಣೆಯಿಂದ ನೀಡುವ ಹಣವನ್ನು ಸ್ವೀಕರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.</p>.<p>ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ₹10 ಮುಖಬೆಲೆಯ ನಾಲ್ಕು ಕೋಟಿ ಕೂಪನ್ಗಳನ್ನು ಮುದ್ರಿಸಿದೆ. ಅದೇ ರೀತಿ ₹100 ಮುಖಬೆಲೆಯ 8 ಕೋಟಿ ಕೂಪನ್ಗಳು ಮತ್ತು ₹1000 ಮುಖಬೆಲೆಯ 12 ಲಕ್ಷ ಕೂಪನ್ಗಳನ್ನು ಮುದ್ರಿಸಲಾಗಿದೆ ಎಂದು ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>