ಇದರ ಬೆನ್ನಲ್ಲೇ, ಸಂಜೆ ಮರಾಠಿ ಸುದ್ದಿ ವಾಹಿನಿ ಜೊತೆ ಮಾತನಾಡಿರುವ ಸಂಜಯ್ ರಾವುತ್, ಬಂಡಾಯ ಬಣದ ಸಚಿವರು ಶಾಸಕರನ್ನು ಕಿತ್ತೊಗೆಯುವ ಪ್ರಕ್ರಿಯೆ ಆರಂಭವಾಗಿದೆ. ಶಿವಸೇನೆ ಪಕ್ಷದ ನಿಷ್ಠಾವಂತರೆಂದು ಪರಿಗಣಿಸಿ ಗುಲಾಬ್ರಾವ್ ಪಾಟೀಲ್, ದಾದಾ ಭುಸೆ, ಸಾಂದಿಪನ್ ಭುಮ್ರೆ ಅವರಿಗೆ ಸಿಎಂ ಉದ್ಧವ್ ಠಾಕ್ರೆ ಸಚಿವ ಸ್ಥಾನ ನೀಡಿದ್ದರು. ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿತ್ತು. ಆದರೆ, ಅವರು ತಪ್ಪು ಹಾದಿ ತುಳಿದಿದ್ದಾರೆ. 24 ಗಂಟೆಗಳಲ್ಲಿ ತಮ್ಮ ಹುದ್ದೆ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.