ನವದೆಹಲಿ: ಭಾರತದ ಪುರಾತತ್ವ ಸಮೀಕ್ಷೆಯ ಆದೇಶದ ಪ್ರಕಾರ ಜುಲೈ 21 ರಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಮುಗಿಯುವವರೆಗೆ ಕೆಂಪು ಕೋಟೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸಾಮಾನ್ಯವಾಗಿ, ಸ್ವಾತಂತ್ರ್ಯ ದಿನಾಚರಣೆಗೂ ಒಂದು ವಾರ ಮೊದಲೇ ಕೋಟೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'2021ರ ಜುಲೈ 21ರ ಬೆಳಿಗ್ಗೆಯಿಂದ 2021ರ ಆಗಸ್ಟ್ 15 ರಿಂದ ಸ್ವಾತಂತ್ರ್ಯ ದಿನಾಚರಣೆ ಮುಗಿಯುವವರೆಗೆ ಕೆಂಪು ಕೋಟೆಯೊಳಗೆ ಯಾವುದೇ ಪ್ರವೇಶವಿರಬಾರದು' ಎಂದು ಭಾರತದ ಪುರಾತತ್ವ ಸಮೀಕ್ಷೆಯ ಮಹಾನಿರ್ದೇಶಕರು ನಿರ್ದೇಶಿದ್ದಾರೆ ಎಂದು ಎಎಸ್ಐ ಆದೇಶದಲ್ಲಿ ತಿಳಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕ ಮತ್ತು ಭದ್ರತಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಜುಲೈ 15 ರಿಂದಲೇ ಪ್ರವೇಶವನ್ನು ನಿರ್ಬಂಧಿಸಬೇಕೆಂದು ದೆಹಲಿ ಪೊಲೀಸರು ಜುಲೈ 12ರಂದು ಪತ್ರ ಬರೆದು ಸೂಚಿಸಿದ್ದರು.