ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೀರ್ಘ ಸಮಯದಿಂದ ಮುಚ್ಚುಗಡೆಗೊಂಡಿದ್ದ ಶಾಲೆಗಳು ತೆರೆದಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ ಊಟವನ್ನು ಪುನರಾರಂಭಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ಕುರಿತು ಪ್ರಸ್ತಾಪಿಸಿರುವ ಸೋನಿಯಾ ಗಾಂಧಿ, ಮಕ್ಕಳಿಗೆ ಪೌಷ್ಟಿಕಾಂಶ ಪೂರೈಕೆಯ ಮಹತ್ವವನ್ನು ಪ್ರತಿಪಾದಿಸಿದರು.
ಸಾಂಕ್ರಾಮಿಕ ರೋಗದಿಂದಾಗಿ ಮಕ್ಕಳಿಗೆ ಅತಿ ಹೆಚ್ಚಿನ ತೊಂದರೆ ಎದುರಾಗಿದೆ ಎಂದು ಸೋನಿಯಾ ಗಾಂಧಿ ತಿಳಿಸಿದರು.
ಕೋವಿಡ್ನಿಂದಾಗಿ ಜೀವನೋಪಾಯಕ್ಕೆ ಮಕ್ಕಳ ಹೆತ್ತವರು ಸಮಸ್ಯೆ ಎದುರಿಸುವಂತಾಯಿತು. ಈಗ ಮಕ್ಕಳು ಶಾಲೆಗೆ ತೆರಳುವಾಗ ಪೌಷ್ಟಿಕಾಂಶ ಪೂರೈಕೆಯ ಅಗತ್ಯವಿದೆ ಎಂದು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳನ್ನು ಮುಚ್ಚಿದಾಗ ಮಧ್ಯಾಹ್ನದ ಊಟವನ್ನು ನಿಲ್ಲಿಸಲಾಗಿತ್ತು.
Children have been the worst affected due to the pandemic. Schools were the first to be closed and the last to be opened. When schools were closed, midday meals had stopped too. People were given ration under National Food Security Act & Supreme Court order: Sonia Gandhi in LS pic.twitter.com/zCxbhIsAcY