<p><strong>ಪಟ್ನಾ:</strong> ಆರ್ಜೆಡಿ ಶಾಸಕ ಸ್ಟೆತೊಸ್ಕೋಪ್ ಹಾಗೂ ರಕ್ತದೊತ್ತಡ ಪರೀಕ್ಷಿಸುವ ಸಾಧನದೊಂದಿಗೆ ಸದನ ಪ್ರವೇಶಿಸಿದಾಗ ಅಲ್ಲಿದ್ದ ಎಲ್ಲರಿಗೂ ಅಚ್ಚರಿ, ಕುತೂಹಲ.</p>.<p>‘ನಾನು ಮುಖ್ಯಮಂತ್ರಿ ನಿತೀಶ್ಕುಮಾರ್ ಅವರ ರಕ್ತದೊತ್ತಡ ಪರೀಕ್ಷಿಸಲು ಬಯಸುತ್ತೇನೆ. ಅವರು ಅನುಮತಿ ಕೊಟ್ಟರೆ ನನ್ನ ಕಾರ್ಯ ಮಾಡುವೆ’ ಎಂದಾಗ ಸದನದ ಕುತೂಹಲ ಇನ್ನೂ ಹೆಚ್ಚಿತು.</p>.<p>ರಕ್ತದೊತ್ತಡ ಸಾಧನದೊಂದಿಗೆ ಸದನಕ್ಕೆ ಬಂದವರು ಮಹುವಾ ಕ್ಷೇತ್ರದ ಶಾಸಕ ಡಾ.ಮುಕೇಶ್ ರೌಶನ್. ಅವರು ವೃತ್ತಿಯಿಂದಲೂ ವೈದ್ಯ.</p>.<p>‘ಇತ್ತೀಚಿನ ದಿನಗಳಲ್ಲಿ ನಿತೀಶ್ಕುಮಾರ್ ಬೇಗ ಸಿಟ್ಟಿಗೇಳುತ್ತಿದ್ದಾರೆ. ಅವರು ಮುಖ್ಯಮಂತ್ರಿ ಮಾತ್ರವಲ್ಲ, ನಮ್ಮ ರಕ್ಷಕರೂ ಆಗಿದ್ದಾರೆ. ಅವರು ಸಣ್ಣಸಣ್ಣ ವಿಷಯಗಳಿಗಾಗಿ ಕೋಪಗೊಳ್ಳಬಾರದು. ಈ ಕಾರಣಕ್ಕಾಗಿಯೇ ನಾನು ಅವರ ರಕ್ತದೊತ್ತಡ ಪರೀಕ್ಷಿಸಲು ನಿರ್ಧರಿಸಿದ್ದು, ಅನುಮತಿ ನೀಡಿದರೆ ಪರೀಕ್ಷಿಸುವೆ’ ಎಂದು ಡಾ.ಮುಕೇಶ್ ಹೇಳಿದರು.</p>.<p>ಅಧಿವೇಶನದಲ್ಲಿ ಸೋಮವಾರ ಮಾತನಾಡುತ್ತಿದ್ದ ನಿತೀಶ್ಕುಮಾರ್, ಆರ್ಜೆಡಿಯ ವಿಧಾನ ಪರಿಷತ್ ಸದಸ್ಯ ಸುಬೋಧ್ ರಾಯ್ ಅವರ ಮೇಲೆ ಕೋಪಗೊಂಡಿದ್ದರು. ‘ನಾನು ಮಾತನಾಡುತ್ತಿರುವಾಗ ಮಧ್ಯ ಬಾಯಿ ಹಾಕಬೇಡ. ಕುಳಿತುಕೋ. ಇದು ನಡೆದುಕೊಳ್ಳುವ ರೀತಿಯೇ’ ಎಂದು ಏರು ದನಿಯಲ್ಲಿ ಪ್ರಶ್ನಿಸಿದ್ದರು.</p>.<p>ಇದೇ ಕಾರಣಕ್ಕಾಗಿ ಡಾ.ಮುಕೇಶ್ ಅವರು ರಕ್ತದೊತ್ತಡ ಪರೀಕ್ಷಿಸುವ ಸಾಧನ, ಸ್ಟೆತೊಸ್ಕೋಪ್ಅನ್ನು ಸದನಕ್ಕೆ ತರುವ ಮೂಲಕ ನಿತೀಶ್ಕುಮಾರ್ಗೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ:</strong> ಆರ್ಜೆಡಿ ಶಾಸಕ ಸ್ಟೆತೊಸ್ಕೋಪ್ ಹಾಗೂ ರಕ್ತದೊತ್ತಡ ಪರೀಕ್ಷಿಸುವ ಸಾಧನದೊಂದಿಗೆ ಸದನ ಪ್ರವೇಶಿಸಿದಾಗ ಅಲ್ಲಿದ್ದ ಎಲ್ಲರಿಗೂ ಅಚ್ಚರಿ, ಕುತೂಹಲ.</p>.<p>‘ನಾನು ಮುಖ್ಯಮಂತ್ರಿ ನಿತೀಶ್ಕುಮಾರ್ ಅವರ ರಕ್ತದೊತ್ತಡ ಪರೀಕ್ಷಿಸಲು ಬಯಸುತ್ತೇನೆ. ಅವರು ಅನುಮತಿ ಕೊಟ್ಟರೆ ನನ್ನ ಕಾರ್ಯ ಮಾಡುವೆ’ ಎಂದಾಗ ಸದನದ ಕುತೂಹಲ ಇನ್ನೂ ಹೆಚ್ಚಿತು.</p>.<p>ರಕ್ತದೊತ್ತಡ ಸಾಧನದೊಂದಿಗೆ ಸದನಕ್ಕೆ ಬಂದವರು ಮಹುವಾ ಕ್ಷೇತ್ರದ ಶಾಸಕ ಡಾ.ಮುಕೇಶ್ ರೌಶನ್. ಅವರು ವೃತ್ತಿಯಿಂದಲೂ ವೈದ್ಯ.</p>.<p>‘ಇತ್ತೀಚಿನ ದಿನಗಳಲ್ಲಿ ನಿತೀಶ್ಕುಮಾರ್ ಬೇಗ ಸಿಟ್ಟಿಗೇಳುತ್ತಿದ್ದಾರೆ. ಅವರು ಮುಖ್ಯಮಂತ್ರಿ ಮಾತ್ರವಲ್ಲ, ನಮ್ಮ ರಕ್ಷಕರೂ ಆಗಿದ್ದಾರೆ. ಅವರು ಸಣ್ಣಸಣ್ಣ ವಿಷಯಗಳಿಗಾಗಿ ಕೋಪಗೊಳ್ಳಬಾರದು. ಈ ಕಾರಣಕ್ಕಾಗಿಯೇ ನಾನು ಅವರ ರಕ್ತದೊತ್ತಡ ಪರೀಕ್ಷಿಸಲು ನಿರ್ಧರಿಸಿದ್ದು, ಅನುಮತಿ ನೀಡಿದರೆ ಪರೀಕ್ಷಿಸುವೆ’ ಎಂದು ಡಾ.ಮುಕೇಶ್ ಹೇಳಿದರು.</p>.<p>ಅಧಿವೇಶನದಲ್ಲಿ ಸೋಮವಾರ ಮಾತನಾಡುತ್ತಿದ್ದ ನಿತೀಶ್ಕುಮಾರ್, ಆರ್ಜೆಡಿಯ ವಿಧಾನ ಪರಿಷತ್ ಸದಸ್ಯ ಸುಬೋಧ್ ರಾಯ್ ಅವರ ಮೇಲೆ ಕೋಪಗೊಂಡಿದ್ದರು. ‘ನಾನು ಮಾತನಾಡುತ್ತಿರುವಾಗ ಮಧ್ಯ ಬಾಯಿ ಹಾಕಬೇಡ. ಕುಳಿತುಕೋ. ಇದು ನಡೆದುಕೊಳ್ಳುವ ರೀತಿಯೇ’ ಎಂದು ಏರು ದನಿಯಲ್ಲಿ ಪ್ರಶ್ನಿಸಿದ್ದರು.</p>.<p>ಇದೇ ಕಾರಣಕ್ಕಾಗಿ ಡಾ.ಮುಕೇಶ್ ಅವರು ರಕ್ತದೊತ್ತಡ ಪರೀಕ್ಷಿಸುವ ಸಾಧನ, ಸ್ಟೆತೊಸ್ಕೋಪ್ಅನ್ನು ಸದನಕ್ಕೆ ತರುವ ಮೂಲಕ ನಿತೀಶ್ಕುಮಾರ್ಗೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>