‘ಬಿಜೆಪಿಯ ಮುಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶರಣಾಗಿದ್ದಾರೆ ಎಂಬ ಭಾವನೆಯನ್ನು ಜೆಡಿಯುನ ಹಲವು ಶಾಸಕರು ಹೊಂದಿದ್ದಾರೆ. ಇನ್ನಷ್ಟು ಶಾಸಕರು ಪಕ್ಷ ಬಿಡಲು ಮುಂದಾದರೆ, ಪಕ್ಷಾಂತರ ನಿಷೇಧ ಕಾನೂನಿನಡಿ ಅನರ್ಹಗೊಳ್ಳುವುದನ್ನು ತಪ್ಪಿಸಬಹುದು ಎಂಬ ಉದ್ದೇಶದಿಂದ ಸದ್ಯಕ್ಕೆ ಪಕ್ಷ ತ್ಯಜಿಸದಂತೆ ಶಾಸಕರಿಗೆ ಆರ್ಜೆಡಿ ಸೂಚಿಸಿದೆ’ ಎಂದು ರಜಕ್ ಹೇಳಿದರು.