‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಸಾಧಿಸಿದ್ದಕ್ಕೆ ತಮಗೆ ಹೃತ್ಪೂರ್ವಕ ಅಭಿನಂದನೆಗಳು‘ ಎಂದುಸೈನಾ ನೆಹ್ವಾಲ್ ಅವರು ಶನಿವಾರ ಟ್ವೀಟ್ ಮಾಡಿದ್ದರು. ಇದಾದ ನಂತರ ಸೈನಾ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಚೌಧರಿ, ‘ಜನರ ತೀರ್ಪನ್ನು ಹಾಳು ಮಾಡುವ ಬಿಜೆಪಿಯ ಕೌಶಲವನ್ನು ಸರ್ಕಾರಿ ಶೆಟ್ಲರ್ ಗುರುತಿಸಿದ್ದಾರೆ. ಸೆಲಬ್ರಿಟಿಗಳು ತಮ್ಮ ನಿರ್ಧಾರಗಳನ್ನು ಜನರ ಮೆಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವಾಗ, ಮತದಾರರು ಅವರ ಹೇಳಿಕೆಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬೇಕಿದೆ‘ ಎಂದು ಅವರು ಹೇಳಿದ್ದಾರೆ.