<p><strong>ನವದೆಹಲಿ:</strong> ‘ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಕೈವಾಡವಿದೆ’ ಎಂದು ಕೇಂದ್ರದ ಸಚಿವ ರಾವ್ಸಾಹೇಬ್ ದಾನವೆ ಅವರು ಹೇಳಿರುವುದು ವಿವಾದ ಸೃಷ್ಟಿಸಿದೆ.</p>.<p>ಪ್ರತಿಭಟನೆಯೊಳಗೆ ಸಮಾಜ ವಿರೋಧಿ ಶಕ್ತಿಗಳು ಹಾಗೂ ಮಾವೊವಾದಿಗಳು ಸೇರಿಕೊಂಡಿದ್ದಾರೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಸಹ ಶನಿವಾರ ಹೇಳಿದ್ದರು.</p>.<p>‘ರೈತರ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಕೇಂದ್ರದ ಸಚಿವರು ಟೀಕೆಗಳ ಮೂಲಕ ಪ್ರತಿಭಟನಾಕಾರರನ್ನು ಅಪಮಾನಿಸಿದ್ದಾರೆ. ಸಚಿವರ ಆರೋಪಗಳಲ್ಲಿ ಹುರುಳಿದೆಯೇ ಎಂಬ ಬಗ್ಗೆ ಪ್ರಧಾನಿ ಅವರು ಸ್ಪಷ್ಟನೆ ನೀಡಬೇಕು’ ಎಂದು ಎನ್ಸಿಪಿ ಒತ್ತಾಯಿಸಿದೆ.</p>.<p>‘ಸಚಿವರು ಹೇಳಿದ್ದು ನಿಜವೇ ಆಗಿದ್ದರೆ ಸರ್ಕಾರವು ಆ ರಾಷ್ಟ್ರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಿ’ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಸವಾಲು ಹಾಕಿದ್ದಾರೆ.</p>.<p>ಪ್ರತಿಭಟನೆಯ ಬಗ್ಗೆ ಕೇಂದ್ರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ರೈತರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಎರಡು ಹೆಜ್ಜೆ ಹಿಂದಿಟ್ಟರೆ ಅದರಿಂದ ಘನತೆಗೆ ಕುಂದು ಉಂಟಾಗುವುದಿಲ್ಲ’ ಎಂದಿದ್ದಾರೆ.</p>.<p><strong>ತನಿಖೆ ನಡೆಯಲಿ:</strong> ‘ರೈತ ಪ್ರತಿಭಟನೆಯೊಳಗೆ ಮಾವೊವಾದಿಗಳು ಸೇರಿಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುವುದು ಅಗತ್ಯ’ ಎಂದು ಕೇಂದ್ರದ ಸಚಿವ, ಎನ್ಡಿಎ ಮಿತ್ರಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ರಾಮದಾಸ ಆಠವಳೆ ಹೇಳಿದ್ದಾರೆ.</p>.<p>ಪ್ರತಿಭಟನೆಯ ಹಿಂದೆ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ ಎಂಬ ದಾನವೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ‘ಅದು ಸರ್ಕಾರದ ನಿಲುವು ಅಲ್ಲ’ ಎಂದರು.</p>.<p><strong>ಕಠಿಣ ಕ್ರಮ:</strong> ‘ದೇಶ ಒಡೆಯುವ ಟುಕಡೆಟುಕಡೆ ಗ್ಯಾಂಗ್ನವರು ರೈತರ ಪ್ರತಿಭಟನೆಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇಂಥವರ ವಿರುದ್ಧ ಮೋದಿ ನೇತೃತ್ವದ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದು ಕೇಂದ್ರದ ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ.</p>.<p><strong>ಡಿಐಜಿ ರಾಜೀನಾಮೆ</strong><br />ಪಂಜಾಬ್ನ ಡಿಐಜಿ (ಕಾರಾಗೃಹ) ಲಖ್ಮಿಂದರ್ಸಿಂಗ್ ಜಖಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಪ್ರತಿಭಟನಾನಿರತ ರೈತರಿಗೆ ಬೆಂಬಲ ಸೂಚಿಸಿದ್ದಾರೆ.</p>.<p>‘ನಾನು ಯಾವತ್ತೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ. ಈಗ ನಾನು ನನ್ನ ಸಹೋದರರ ಜತೆಗೆ ಇರಬೇಕು ಎಂಬುದನ್ನು ಮನಗಂಡು ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅವರು ಸರ್ಕಾರಕ್ಕೆ ಶನಿವಾರ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.</p>.<p><strong>ಗಾಂಧಿ ಪ್ರತಿಮೆಗೆ ಹಾನಿ<br />ವಾಷಿಂಗ್ಟನ್ (ಪಿಟಿಐ):</strong> ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಇಲ್ಲಿನ ಖಲಿಸ್ತಾನ ಪ್ರತ್ಯೇಕತಾವಾದಿ ಗುಂಪಿನ ನೂರಾರು ಯುವಕರು ಭಾರತೀಯ ದೂತಾವಾಸದ ಆವರಣದಲ್ಲಿ ಪ್ರತಿಭಟನೆ ನಡೆಸಿ, ಗಾಂಧೀಜಿಯ ಪ್ರತಿಮೆಗೆ ಹಾನಿ ಉಂಟುಮಾಡಿದ್ದಾರೆ.</p>.<p>ವಿವಿಧ ರಾಜ್ಯಗಳಿಂದ ಬಂದಿದ್ದ ಅಮೆರಿಕನ್ ಸಿಖ್ಖ್ ಸಮುದಾಯದ ಯುವಕರು ವಾಷಿಂಗ್ಟನ್ ಡಿಸಿಯಲ್ಲಿರುವ ದೂತಾವಾಸದ ಮುಂದೆ ಪ್ರತಿಭಟನೆ ಆರಂಭಿಸಿದ್ದರು. ಸ್ವಲ್ಪ ಸಮಯದಲ್ಲೇ ಪ್ರತಿಭಟನೆಯ ನೇತೃತ್ವವನ್ನು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೈಗೆತ್ತಿಕೊಂಡರು. ಇವರು ಖಲಿಸ್ತಾನದ ಧ್ವಜ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಹೊಂದಿದ್ದ ಫಲಕಗಳನ್ನು ಹಿಡಿದಿದ್ದರು.</p>.<p>ಅವರಲ್ಲಿ ಕೆಲವರು ಮಹಾತ್ಮ ಗಾಂಧಿ ಅವರ ಪ್ರತಿಮೆಯ ಮೇಲೆ ಹತ್ತಿ, ಅದರ ಮೇಲೂ ಪೋಸ್ಟರ್ ಅಂಟಿಸಿದರು. ಬಳಿಕ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಸ್ವಲ್ಪ ಹೊತ್ತಿನ ಬಳಿಕ ಆ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ನೇಣಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿತು.</p>.<p><strong>ಎರಡು ಕೋಟಿ ಇ–ಮೇಲ್</strong><br />ಸಿಖ್ ಸಮುದಾಯವನ್ನು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ 13 ನಿರ್ಧಾರಗಳ ವಿವರಗಳನ್ನು ಹೊಂದಿರುವ ಇ-ಮೇಲ್ ಅನ್ನು ರೈಲ್ವೆ ಇಲಾಖೆಯ ಐಆರ್ಸಿಟಿಸಿ ಸಂಸ್ಥೆಯು ಎರಡು ಕೋಟಿ ಗ್ರಾಹಕರಿಗೆ ಕಳುಹಿಸಿದೆ.</p>.<p>ಸಿಖ್ ಸಮುದಾಯದ ಜತೆಗೆ ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರ ಹೊಂದಿರುವ ಬಾಂಧವ್ಯದ ವಿವರ ಹೊಂದಿರುವ, 47 ಪುಟಗಳ<br />ಕಿರು ಪುಸ್ತಿಕೆಯನ್ನು ಡಿ.8ರಿಂದ 12ರ ಒಳಗಿನ ಅವಧಿಯಲ್ಲಿ ಮೇಲ್ ಮಾಡಲಾಗಿದೆ.</p>.<p>ಸಿಖ್ ಸಮುದಾಯದವರಿಗೆ ಮಾತ್ರ ಮೇಲ್ ಕಳುಹಿಸಲಾಗಿದೆ ಎಂಬ ವಾದವನ್ನು ಸಂಸ್ಥೆ ತಳ್ಳಿಹಾಕಿದೆ. ಸಂಸ್ಥೆಯ ಡಾಟಾಬೇಸ್ನಲ್ಲಿರುವ ಎಲ್ಲಾ ವಿಳಾಸಗಳಿಗೂ ಇದರ ಪ್ರತಿಯನ್ನು ಕಳುಹಿಸಲಾಗಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳ ವಿವರಗಳನ್ನು ಜನರಿಗೆ ತಲುಪಿಸಲು ಈ ಹಿಂದೆಯೂ ಇಂಥ ಕ್ರಮ ಕೈಗೊಳ್ಳಲಾಗಿತ್ತು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಕೈವಾಡವಿದೆ’ ಎಂದು ಕೇಂದ್ರದ ಸಚಿವ ರಾವ್ಸಾಹೇಬ್ ದಾನವೆ ಅವರು ಹೇಳಿರುವುದು ವಿವಾದ ಸೃಷ್ಟಿಸಿದೆ.</p>.<p>ಪ್ರತಿಭಟನೆಯೊಳಗೆ ಸಮಾಜ ವಿರೋಧಿ ಶಕ್ತಿಗಳು ಹಾಗೂ ಮಾವೊವಾದಿಗಳು ಸೇರಿಕೊಂಡಿದ್ದಾರೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಸಹ ಶನಿವಾರ ಹೇಳಿದ್ದರು.</p>.<p>‘ರೈತರ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಕೇಂದ್ರದ ಸಚಿವರು ಟೀಕೆಗಳ ಮೂಲಕ ಪ್ರತಿಭಟನಾಕಾರರನ್ನು ಅಪಮಾನಿಸಿದ್ದಾರೆ. ಸಚಿವರ ಆರೋಪಗಳಲ್ಲಿ ಹುರುಳಿದೆಯೇ ಎಂಬ ಬಗ್ಗೆ ಪ್ರಧಾನಿ ಅವರು ಸ್ಪಷ್ಟನೆ ನೀಡಬೇಕು’ ಎಂದು ಎನ್ಸಿಪಿ ಒತ್ತಾಯಿಸಿದೆ.</p>.<p>‘ಸಚಿವರು ಹೇಳಿದ್ದು ನಿಜವೇ ಆಗಿದ್ದರೆ ಸರ್ಕಾರವು ಆ ರಾಷ್ಟ್ರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಿ’ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಸವಾಲು ಹಾಕಿದ್ದಾರೆ.</p>.<p>ಪ್ರತಿಭಟನೆಯ ಬಗ್ಗೆ ಕೇಂದ್ರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ರೈತರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಎರಡು ಹೆಜ್ಜೆ ಹಿಂದಿಟ್ಟರೆ ಅದರಿಂದ ಘನತೆಗೆ ಕುಂದು ಉಂಟಾಗುವುದಿಲ್ಲ’ ಎಂದಿದ್ದಾರೆ.</p>.<p><strong>ತನಿಖೆ ನಡೆಯಲಿ:</strong> ‘ರೈತ ಪ್ರತಿಭಟನೆಯೊಳಗೆ ಮಾವೊವಾದಿಗಳು ಸೇರಿಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುವುದು ಅಗತ್ಯ’ ಎಂದು ಕೇಂದ್ರದ ಸಚಿವ, ಎನ್ಡಿಎ ಮಿತ್ರಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ರಾಮದಾಸ ಆಠವಳೆ ಹೇಳಿದ್ದಾರೆ.</p>.<p>ಪ್ರತಿಭಟನೆಯ ಹಿಂದೆ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ ಎಂಬ ದಾನವೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ‘ಅದು ಸರ್ಕಾರದ ನಿಲುವು ಅಲ್ಲ’ ಎಂದರು.</p>.<p><strong>ಕಠಿಣ ಕ್ರಮ:</strong> ‘ದೇಶ ಒಡೆಯುವ ಟುಕಡೆಟುಕಡೆ ಗ್ಯಾಂಗ್ನವರು ರೈತರ ಪ್ರತಿಭಟನೆಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇಂಥವರ ವಿರುದ್ಧ ಮೋದಿ ನೇತೃತ್ವದ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದು ಕೇಂದ್ರದ ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ.</p>.<p><strong>ಡಿಐಜಿ ರಾಜೀನಾಮೆ</strong><br />ಪಂಜಾಬ್ನ ಡಿಐಜಿ (ಕಾರಾಗೃಹ) ಲಖ್ಮಿಂದರ್ಸಿಂಗ್ ಜಖಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಪ್ರತಿಭಟನಾನಿರತ ರೈತರಿಗೆ ಬೆಂಬಲ ಸೂಚಿಸಿದ್ದಾರೆ.</p>.<p>‘ನಾನು ಯಾವತ್ತೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ. ಈಗ ನಾನು ನನ್ನ ಸಹೋದರರ ಜತೆಗೆ ಇರಬೇಕು ಎಂಬುದನ್ನು ಮನಗಂಡು ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅವರು ಸರ್ಕಾರಕ್ಕೆ ಶನಿವಾರ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.</p>.<p><strong>ಗಾಂಧಿ ಪ್ರತಿಮೆಗೆ ಹಾನಿ<br />ವಾಷಿಂಗ್ಟನ್ (ಪಿಟಿಐ):</strong> ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಇಲ್ಲಿನ ಖಲಿಸ್ತಾನ ಪ್ರತ್ಯೇಕತಾವಾದಿ ಗುಂಪಿನ ನೂರಾರು ಯುವಕರು ಭಾರತೀಯ ದೂತಾವಾಸದ ಆವರಣದಲ್ಲಿ ಪ್ರತಿಭಟನೆ ನಡೆಸಿ, ಗಾಂಧೀಜಿಯ ಪ್ರತಿಮೆಗೆ ಹಾನಿ ಉಂಟುಮಾಡಿದ್ದಾರೆ.</p>.<p>ವಿವಿಧ ರಾಜ್ಯಗಳಿಂದ ಬಂದಿದ್ದ ಅಮೆರಿಕನ್ ಸಿಖ್ಖ್ ಸಮುದಾಯದ ಯುವಕರು ವಾಷಿಂಗ್ಟನ್ ಡಿಸಿಯಲ್ಲಿರುವ ದೂತಾವಾಸದ ಮುಂದೆ ಪ್ರತಿಭಟನೆ ಆರಂಭಿಸಿದ್ದರು. ಸ್ವಲ್ಪ ಸಮಯದಲ್ಲೇ ಪ್ರತಿಭಟನೆಯ ನೇತೃತ್ವವನ್ನು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೈಗೆತ್ತಿಕೊಂಡರು. ಇವರು ಖಲಿಸ್ತಾನದ ಧ್ವಜ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಹೊಂದಿದ್ದ ಫಲಕಗಳನ್ನು ಹಿಡಿದಿದ್ದರು.</p>.<p>ಅವರಲ್ಲಿ ಕೆಲವರು ಮಹಾತ್ಮ ಗಾಂಧಿ ಅವರ ಪ್ರತಿಮೆಯ ಮೇಲೆ ಹತ್ತಿ, ಅದರ ಮೇಲೂ ಪೋಸ್ಟರ್ ಅಂಟಿಸಿದರು. ಬಳಿಕ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಸ್ವಲ್ಪ ಹೊತ್ತಿನ ಬಳಿಕ ಆ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ನೇಣಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿತು.</p>.<p><strong>ಎರಡು ಕೋಟಿ ಇ–ಮೇಲ್</strong><br />ಸಿಖ್ ಸಮುದಾಯವನ್ನು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ 13 ನಿರ್ಧಾರಗಳ ವಿವರಗಳನ್ನು ಹೊಂದಿರುವ ಇ-ಮೇಲ್ ಅನ್ನು ರೈಲ್ವೆ ಇಲಾಖೆಯ ಐಆರ್ಸಿಟಿಸಿ ಸಂಸ್ಥೆಯು ಎರಡು ಕೋಟಿ ಗ್ರಾಹಕರಿಗೆ ಕಳುಹಿಸಿದೆ.</p>.<p>ಸಿಖ್ ಸಮುದಾಯದ ಜತೆಗೆ ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರ ಹೊಂದಿರುವ ಬಾಂಧವ್ಯದ ವಿವರ ಹೊಂದಿರುವ, 47 ಪುಟಗಳ<br />ಕಿರು ಪುಸ್ತಿಕೆಯನ್ನು ಡಿ.8ರಿಂದ 12ರ ಒಳಗಿನ ಅವಧಿಯಲ್ಲಿ ಮೇಲ್ ಮಾಡಲಾಗಿದೆ.</p>.<p>ಸಿಖ್ ಸಮುದಾಯದವರಿಗೆ ಮಾತ್ರ ಮೇಲ್ ಕಳುಹಿಸಲಾಗಿದೆ ಎಂಬ ವಾದವನ್ನು ಸಂಸ್ಥೆ ತಳ್ಳಿಹಾಕಿದೆ. ಸಂಸ್ಥೆಯ ಡಾಟಾಬೇಸ್ನಲ್ಲಿರುವ ಎಲ್ಲಾ ವಿಳಾಸಗಳಿಗೂ ಇದರ ಪ್ರತಿಯನ್ನು ಕಳುಹಿಸಲಾಗಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳ ವಿವರಗಳನ್ನು ಜನರಿಗೆ ತಲುಪಿಸಲು ಈ ಹಿಂದೆಯೂ ಇಂಥ ಕ್ರಮ ಕೈಗೊಳ್ಳಲಾಗಿತ್ತು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>