ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಸುಮಿತ್ರಾ ಮಹಾಜನ್ ಜೀ ಅವರ ಮಗನ ಜತೆ ಮಾತನಾಡಿ ನಿನ್ನೆ ರಾತ್ರಿ (ಗುರುವಾರ) ಸುಳ್ಳು ಮಾಹಿತಿ ಟ್ವೀಟ್ ಮಾಡಿದ್ದಕ್ಕೆ ಸಂಬಂಧಿಸಿ ಕ್ಷಮೆ ಕೋರಿದೆ. ಅವರಿಗೆ ವಿಷಯ ಅರ್ಥವಾಯಿತಲ್ಲದೆ ನನ್ನ ಬಗ್ಗೆ ಕೃಪಾದೃಷ್ಟಿ ಹೊಂದಿದ್ದಾರೆ. ಸುಮಿತ್ರಾ ಮಹಾಜನ್ ಅವರು ಚೆನ್ನಾಗಿದ್ದಾರೆಂದು ತಿಳಿದು ಬಹಳ ಸಂತಸವಾಗಿದೆ. ಅವರಿಗೆ ಮತ್ತು ಅವರ ಕುಟುಂಬದವರಿಗೆ ನನ್ನ ಶುಭ ಹಾರೈಕೆಗಳನ್ನು ತಿಳಿಸಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.