ತ್ರಿಶೂಲದ ಚಿಹ್ನೆಯನ್ನು ಹಂಚಿಕೆ ಮಾಡುವಂತೆ ಠಾಕ್ರೆ ಬಣ ಮಾಡಿದ್ದ ಮನವಿಯನ್ನು ಸೋಮವಾರ ತಿರಸ್ಕರಿಸಿದ್ದ ಚುನಾವಣಾ ಆಯೋಗ, ಪಂಜಿನ ಚಿಹ್ನೆಯನ್ನು ಹಂಚಿಕೆ ಮಾಡಿತ್ತು. ಜೊತೆಗೆ,ಉದ್ಧವ್ ಬಣಕ್ಕೆ ‘ಶಿವಸೇನಾ–ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಹಾಗೂ ಶಿಂದೆ ಬಣಕ್ಕೆ ‘ಬಾಳಾಸಾಹೇಬಾಚಿ ಶಿವಸೇನಾ (ಬಾಳಾಸಾಹೇಬರ ಶಿವಸೇನಾ) ಎಂಬ ಹೆಸರುಗಳನ್ನೂ ಹಂಚಿಕೆ ಮಾಡಿತ್ತು.ಉಭಯ ಬಣಗಳು ಈ ಹೆಸರುಗಳ ಅಡಿಯಲ್ಲೇ ಮುಂಬರುವ ಉಪಚುನಾವಣೆಯನ್ನು ಎದುರಿಸಬೇಕಾಗುತ್ತದೆ.