‘ನವೆಂಬರ್ 29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿಯುವವರೆಗೂ ನಿತ್ಯ ಸ್ವಇಚ್ಛೆಯಿಂದ ಬರುವ ರೈತರು ಟ್ರ್ಯಾಕ್ಟರ್ನಲ್ಲಿ ಸಂಸತ್ಭವನದವರೆಗೆ ಜಾಥಾ ನಡೆಸಲಿದ್ದಾರೆ. ಇದು ಶಾಂತಿಯುತ ಮತ್ತು ಶಿಸ್ತಿನ ಮೆರವಣಿಗೆ ಆಗಲಿದ್ದು, ರಾಜಧಾನಿಯಲ್ಲಿ ಪ್ರತಿಭಟಿಸುವ ತಮ್ಮ ಹಕ್ಕನ್ನು ಸಾರಲಿದ್ದಾರೆ’ಎಂದು ಎಸ್ಕೆಎಂ ಹೇಳಿಕೆಯಲ್ಲಿ ತಿಳಿಸಿದೆ.