<p class="title"><strong>ಪುಣೆ: </strong>ಭಾರತ– ಚೀನಾ ಗಡಿ ಬಿಕ್ಕಟ್ಟಿನ ಕುರಿತು ಕೆಲವರು ರಾಜಕೀಯ ಉದ್ದೇಶಕ್ಕಾಗಿ ಬೇಕೆಂದೇ ಸುಳ್ಳುಸುದ್ದಿ ಹರಡುತ್ತಿದ್ದಾರೆ. 1962ರಲ್ಲಿ ಚೀನಾ ಕಬಳಿಸಿದ್ದ ಭಾರತದ ಭೂಪ್ರದೇಶವನ್ನು ಉಲ್ಲೇಖಿಸಿ ಅದನ್ನು ಇತ್ತೀಚಿನ ವಿದ್ಯಮಾನ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶನಿವಾರ ಹೇಳಿದರು.</p>.<p class="title">ತಮ್ಮ ‘ದಿ ಇಂಡಿಯ ವೇ’ ಪುಸ್ತಕದ ಮರಾಠಿ ಅನುವಾದ ‘ಭಾರತ್ ಮಾರ್ಗ್’ದ ಬಿಡುಗಡೆ ಸಮಾರಂಭದಲ್ಲಿ ಜನರ ಜೊತೆ ಜೈಶಂಕರ್ ಸಂವಾದ ನಡೆಸಿದರು. ಆ ವೇಳೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಚೀನಾ ವಿಷಯದಲ್ಲಿ ಭಾರತದ ಸಾಮರ್ಥ್ಯದ ಕುರಿತು ವಿರೋಧ ಪಕ್ಷಗಳಿಗೆ ವಿಶ್ವಾಸ ಏಕೆ ಇಲ್ಲ ಎಂದರೆ, ಅವರು ರಾಜಕೀಯ ಉದ್ದೇಶಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಬೇಕೆಂದೇ ಸುಳ್ಳು ಸುದ್ದಿ ಹರಡುತ್ತಿದ್ದಾರೆ’ ಎಂದರು.</p>.<p class="bodytext">ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಅವರು, ‘1962ರಲ್ಲಿ ಚೀನಾ ಆಕ್ರಮಿಸಿಕೊಂಡಿದ್ದ ಭಾರತದ ಭೂಪ್ರದೇಶದ ಕುರಿತು ಕೆಲವರು ಮಾತನಾಡುತ್ತಾರೆ. ಆದರೆ ಸಂಪೂರ್ಣ ಸತ್ಯವನ್ನು ಜನರಿಗೆ ತಿಳಿಸುವುದಿಲ್ಲ’ ಎಂದರು. </p>.<p class="bodytext">ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಿಂಧೂ ಜಲ ಒಪ್ಪಂದ (ಐಡಬ್ಲ್ಯುಟಿ) ಕುರಿತು ಮಾತನಾಡಿದ ಅವರು, ಇದೊಂದು ತಾಂತ್ರಿಕ ವಿಷಯ. ಈ ಕುರಿತು ಉಭಯ ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸಲಿದ್ದಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಪುಣೆ: </strong>ಭಾರತ– ಚೀನಾ ಗಡಿ ಬಿಕ್ಕಟ್ಟಿನ ಕುರಿತು ಕೆಲವರು ರಾಜಕೀಯ ಉದ್ದೇಶಕ್ಕಾಗಿ ಬೇಕೆಂದೇ ಸುಳ್ಳುಸುದ್ದಿ ಹರಡುತ್ತಿದ್ದಾರೆ. 1962ರಲ್ಲಿ ಚೀನಾ ಕಬಳಿಸಿದ್ದ ಭಾರತದ ಭೂಪ್ರದೇಶವನ್ನು ಉಲ್ಲೇಖಿಸಿ ಅದನ್ನು ಇತ್ತೀಚಿನ ವಿದ್ಯಮಾನ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶನಿವಾರ ಹೇಳಿದರು.</p>.<p class="title">ತಮ್ಮ ‘ದಿ ಇಂಡಿಯ ವೇ’ ಪುಸ್ತಕದ ಮರಾಠಿ ಅನುವಾದ ‘ಭಾರತ್ ಮಾರ್ಗ್’ದ ಬಿಡುಗಡೆ ಸಮಾರಂಭದಲ್ಲಿ ಜನರ ಜೊತೆ ಜೈಶಂಕರ್ ಸಂವಾದ ನಡೆಸಿದರು. ಆ ವೇಳೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಚೀನಾ ವಿಷಯದಲ್ಲಿ ಭಾರತದ ಸಾಮರ್ಥ್ಯದ ಕುರಿತು ವಿರೋಧ ಪಕ್ಷಗಳಿಗೆ ವಿಶ್ವಾಸ ಏಕೆ ಇಲ್ಲ ಎಂದರೆ, ಅವರು ರಾಜಕೀಯ ಉದ್ದೇಶಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಬೇಕೆಂದೇ ಸುಳ್ಳು ಸುದ್ದಿ ಹರಡುತ್ತಿದ್ದಾರೆ’ ಎಂದರು.</p>.<p class="bodytext">ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಅವರು, ‘1962ರಲ್ಲಿ ಚೀನಾ ಆಕ್ರಮಿಸಿಕೊಂಡಿದ್ದ ಭಾರತದ ಭೂಪ್ರದೇಶದ ಕುರಿತು ಕೆಲವರು ಮಾತನಾಡುತ್ತಾರೆ. ಆದರೆ ಸಂಪೂರ್ಣ ಸತ್ಯವನ್ನು ಜನರಿಗೆ ತಿಳಿಸುವುದಿಲ್ಲ’ ಎಂದರು. </p>.<p class="bodytext">ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಿಂಧೂ ಜಲ ಒಪ್ಪಂದ (ಐಡಬ್ಲ್ಯುಟಿ) ಕುರಿತು ಮಾತನಾಡಿದ ಅವರು, ಇದೊಂದು ತಾಂತ್ರಿಕ ವಿಷಯ. ಈ ಕುರಿತು ಉಭಯ ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸಲಿದ್ದಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>