‘ಇ.ಶ್ರೀಧರನ್ ಅವರ ರಾಜಕೀಯ ಕ್ಷೇತ್ರದ ಪ್ರವೇಶ ಹಾಗೂ ಬಿಜೆಪಿ ಸೇರ್ಪಡೆ ವಿಚಾರ ಕೇಳಿ ತುಂಬಾ ಆಶ್ಚರ್ಯವಾಯಿತು’ ಎಂದು ಹೇಳಿರುವ ಅವರು, ’ತಂತ್ರಜ್ಞರು ಅವರ ಕ್ಷೇತ್ರದಲ್ಲಿ ಎಷ್ಟೇ ಸಾಧನೆ ಮಾಡಿದ್ದರೂ, ನೀತಿ ನಿರೂಪಣೆ ಅವರಿಂದ ಸಾಧ್ಯವಿಲ್ಲ. ಇದೊಂದು ವಿಭಿನ್ನ ಜಗತ್ತು. ಶ್ರೀಧರನ್ ಅವರಿಗೆ ಯಾವುದೇ ರಾಜಕೀಯ ಅನುಭವ ಅಥವಾ ಹಿನ್ನೆಲೆ ಇಲ್ಲ, ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಅವರ ಪರಿಣಾಮ ಕ್ಷುಲ್ಲಕವಾಗಿರುತ್ತದೆ‘ ಎಂದು ಹೇಳಿದ್ದಾರೆ.