ವಕೀಲರಾದ ಆಲ್ದನಿಶ್ ರೀನ್ ಮತ್ತು ರಮೇಶ್ ಕುಮಾರ್ ಮಿಶ್ರ ಅವರು ಲಾಂಛನದ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಸಿಂಹಗಳ ಬಾಯಿ ತೆರೆದಿದೆ ಮತ್ತು ಕೋರೆಹಲ್ಲುಗಳು ಕಾಣುತ್ತವೆ. ಅವನ್ನು ‘ಉಗ್ರ ಮತ್ತು ಆಕ್ರಮಣಕಾರಿ’ಯಂತೆ ತೋರಿಸಲಾಗಿದೆ ಎಂದು ಅವರು ಅರ್ಜಿಯಲ್ಲಿ ಆಕ್ಷೇಪಿಸಿದ್ದರು. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ ಈ ಅರ್ಜಿಯನ್ನು ತಿರಸ್ಕರಿಸಿದೆ. ‘ವ್ಯಕ್ತಿಯ ಮನಸ್ಥಿತಿಯ ಮೇಲೆ ಆತನ ಅಭಿಪ್ರಾಯ ನಿರ್ಧಾರವಾಗುತ್ತದೆ’ ಎಂದು ಪೀಠ ಹೇಳಿದೆ.