ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಕ್ಷದ ವಕ್ತಾರ ಶಕ್ತಿಸಿನ್ಹ್ ಗೋಹಿಲ್, ‘ನೆರೆಯ ಚೀನಾ ನಮ್ಮ ಗಡಿಗಳನ್ನು ಪ್ರವೇಶಿಸಿದ್ದ ಸಂದರ್ಭದಲ್ಲಿ ಅಗ್ನಿಪಥ ಯೋಜನೆಯು ರಾಷ್ಟ್ರೀಯ ಭದ್ರತೆಯ ಜೊತೆಗಿನ ಆಟದಂತಾಗಿದೆ. ಕಾಂಗ್ರೆಸ್ ಯುವಕರ ಜೊತೆ ನಿಲ್ಲಲಿದ್ದು, ತುಘಲಕ್ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು’ ಎಂದರು.