ನವದೆಹಲಿ: ಗುಜರಾತ್ನ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ತಿರಂಗಾ ಯಾತ್ರೆ ನಡೆಸುತ್ತಿದ್ದಾಗ ಓಡೋಡಿ ಬಂದ ಹಸು ಡಿಕ್ಕಿ ಹೊಡೆದ ಪರಿಣಾಮ ಎಡಗಾಲಿಗೆ ಗಾಯವಾಗಿರುವಘಟನೆ ವರದಿಯಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಂತೆ ನಿತಿನ್ ಪಟೇಲ್ ನೇತೃತ್ವದಲ್ಲಿಮೆಹಸಾನಾದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ತ್ರಿವರ್ಣ ಧ್ವಜ ಹಿಡಿದ ಗುಂಪಿಗೆ ಏಕಾಏಕಿ ನುಗ್ಗಿದ ಹಸು, ಪಟೇಲ್ ಅವರಿಗೆ ಢಿಕ್ಕಿ ಹೊಡೆದಿದೆ.
ಗುಜರಾತ್ನ ಆಮ್ ಆದ್ಮಿ ಪಕ್ಷದ ನಾಯಕ ಮಾಡಿರುವ ಮಗದೊಂದು ಟ್ವೀಟ್ನಲ್ಲಿ, ಗಾಯಗೊಂಡಿರುವ ಪಟೇಲ್, ವೀಲ್ ಚೇರ್ನಲ್ಲಿ ಸಾಗುತ್ತಿರುವ ಚಿತ್ರ ಹಂಚಿಕೊಂಡಿದ್ದು, ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ.
He is former Dy. CM @Nitinbhai_Patel today he got injured by a running cow. May Allah grant him speedy recovery.