<p><strong>ನವದೆಹಲಿ: </strong>‘ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್ಇಪಿ) 21ನೇ ಶತಮಾನದಲ್ಲಿ ಭಾರತಕ್ಕೆ ಹೊಸ ದಿಕ್ಕು ತೋರಲಿದೆ. ನವ ಯುಗಕ್ಕೆ ನಾಂದಿ ಹಾಡಲಿದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.</p>.<p>ರಾಷ್ಟ್ರೀಯ ಶಿಕ್ಷಣ ನೀತಿ–2020ರ ಅಡಿಯಲ್ಲಿ ಆಯೋಜಿಸಿರುವ ‘21ನೇ ಶತಮಾನದಲ್ಲಿ ಶಾಲಾ ಶಿಕ್ಷಣ’ ಕುರಿತ ಆನ್ಲೈನ್ ಸಮಾವೇಶ ಉದ್ದೇಶಿಸಿ ಶುಕ್ರವಾರ ಅವರು ಮಾತನಾಡಿದರು.</p>.<p>ಕನಿಷ್ಠ ಐದನೇ ತರಗತಿವರೆಗೂ ಮಕ್ಕಳು, ಮಾತೃಭಾಷೆ ಇಲ್ಲವೇ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪಡೆಯುವುದರ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ಇಂಗ್ಲಿಷ್ ಸೇರಿದಂತೆ ತಮಗೆ ಅನುಕೂಲಕರವಾಗುವ ಯಾವುದೇ ಭಾಷೆಯನ್ನಾದರೂ ಮಕ್ಕಳು ಕಲಿಯಬಹುದು.ಇದಕ್ಕೆ ಎನ್ಇಪಿ ಅಡ್ಡಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.</p>.<p>‘ಹಿಂದಿನ ಮೂರು ದಶಕಗಳಲ್ಲಿ ಜಗತ್ತು ಸಾಕಷ್ಟು ಬದಲಾಗಿದೆ. ಆದರೆ ನಮ್ಮ ಶಿಕ್ಷಣ ನೀತಿ ಹಾಗೆಯೇ ಇದೆ. ಈಗಿನ ವ್ಯವಸ್ಥೆಯಲ್ಲಿ ಅಂಕ ಪಟ್ಟಿಯು ವಿದ್ಯಾರ್ಥಿಗಳ ಪಾಲಿಗೆ ‘ಒತ್ತಡದ ಪಟ್ಟಿ’ಯಾಗಿದೆ. ಅವರ ಕುಟುಂಬದವರ ಪಾಲಿಗೆ ಅದು ‘ಪ್ರತಿಷ್ಠೆಯ ಪಟ್ಟಿ’ಯಾಗಿ ಪರಿಣಮಿಸಿದೆ. ಈ ಒತ್ತಡವನ್ನು ನಿವಾರಿಸುವುದು ಹೊಸ ಶಿಕ್ಷಣ ನೀತಿಯ ಗುರಿ’ ಎಂದು ಮೋದಿ ಪ್ರತಿಪಾದಿಸಿದರು.</p>.<p>‘75ನೇ ಸ್ವಾತಂತ್ರ್ಯೋತ್ಸವದ ವರ್ಷದಲ್ಲಿ ಅಂದರೆ 2022ಕ್ಕೆ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಅಡಿಯಲ್ಲಿ ಸಿದ್ಧಪಡಿಸಿರುವ ಹೊಸ ಪಠ್ಯಕ್ರಮವನ್ನು ಅಭ್ಯಸಿಸುವಂತಾಗಬೇಕು. ಇದು ನಮ್ಮೆಲ್ಲರ ಜವಾಬ್ದಾರಿ’ ಎಂದು ಶಿಕ್ಷಕರು, ಪೋಷಕರು, ರಾಜ್ಯಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳನ್ನು ಉದ್ದೇಶಿಸಿ ಹೇಳಿದರು.</p>.<p>‘ಕೆಲಸ ಇನ್ನೂ ಅಂತಿಮವಾಗಿಲ್ಲ. ಎನ್ಇಪಿ ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಿದೆ. ಈ ದಿಶೆಯಲ್ಲಿ ನಾವೆಲ್ಲಾ ಒಗ್ಗೂಡಿ ಕೆಲಸ ಮಾಡಬೇಕು. ಎನ್ಇಪಿ ಬಗ್ಗೆ ಜನರಲ್ಲಿ ಹಲವು ಪ್ರಶ್ನೆಗಳಿದ್ದು, ಅವು ನ್ಯಾಯಸಮ್ಮತವಾಗಿವೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವ ಪೀಳಿಗೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಎನ್ಇಪಿಯು ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಿದೆ’ ಎಂದರು.</p>.<p><strong>ಭಾಷಣದ ಮುಖ್ಯಾಂಶಗಳು:</strong></p>.<p>*ಕಲಿಕೆಗೆ ಸುಲಭ ಮತ್ತು ಹೊಸ ತಂತ್ರಗಳನ್ನು ನಾವು ಉತ್ತೇಜಿಸಬೇಕು.</p>.<p>*ತೊಡಗಿಸಿಕೊಳ್ಳುವಿಕೆ, ಶೋಧನೆ, ಅನುಭವ, ಅಭಿವ್ಯಕ್ತಿ ಮತ್ತು ಉತ್ತಮ ಕಾರ್ಯನಿರ್ವಹಣೆಯು ಸುಲಭ ಹಾಗೂ ಹೊಸ ತಂತ್ರಗಳ ಮೂಲಗಳಾಗಿವೆ.</p>.<p>*ದೇಶದ ಪ್ರತಿ ಪ್ರದೇಶವೂ ಅದರದ್ದೇ ಆದ ಕೆಲ ವಿಶೇಷತೆಗಳನ್ನು ಹೊಂದಿರುತ್ತದೆ. ಆಯಾ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಅವುಗಳ ಬಗ್ಗೆ ತಿಳಿದುಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>‘ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್ಇಪಿ) 21ನೇ ಶತಮಾನದಲ್ಲಿ ಭಾರತಕ್ಕೆ ಹೊಸ ದಿಕ್ಕು ತೋರಲಿದೆ. ನವ ಯುಗಕ್ಕೆ ನಾಂದಿ ಹಾಡಲಿದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.</p>.<p>ರಾಷ್ಟ್ರೀಯ ಶಿಕ್ಷಣ ನೀತಿ–2020ರ ಅಡಿಯಲ್ಲಿ ಆಯೋಜಿಸಿರುವ ‘21ನೇ ಶತಮಾನದಲ್ಲಿ ಶಾಲಾ ಶಿಕ್ಷಣ’ ಕುರಿತ ಆನ್ಲೈನ್ ಸಮಾವೇಶ ಉದ್ದೇಶಿಸಿ ಶುಕ್ರವಾರ ಅವರು ಮಾತನಾಡಿದರು.</p>.<p>ಕನಿಷ್ಠ ಐದನೇ ತರಗತಿವರೆಗೂ ಮಕ್ಕಳು, ಮಾತೃಭಾಷೆ ಇಲ್ಲವೇ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪಡೆಯುವುದರ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ಇಂಗ್ಲಿಷ್ ಸೇರಿದಂತೆ ತಮಗೆ ಅನುಕೂಲಕರವಾಗುವ ಯಾವುದೇ ಭಾಷೆಯನ್ನಾದರೂ ಮಕ್ಕಳು ಕಲಿಯಬಹುದು.ಇದಕ್ಕೆ ಎನ್ಇಪಿ ಅಡ್ಡಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.</p>.<p>‘ಹಿಂದಿನ ಮೂರು ದಶಕಗಳಲ್ಲಿ ಜಗತ್ತು ಸಾಕಷ್ಟು ಬದಲಾಗಿದೆ. ಆದರೆ ನಮ್ಮ ಶಿಕ್ಷಣ ನೀತಿ ಹಾಗೆಯೇ ಇದೆ. ಈಗಿನ ವ್ಯವಸ್ಥೆಯಲ್ಲಿ ಅಂಕ ಪಟ್ಟಿಯು ವಿದ್ಯಾರ್ಥಿಗಳ ಪಾಲಿಗೆ ‘ಒತ್ತಡದ ಪಟ್ಟಿ’ಯಾಗಿದೆ. ಅವರ ಕುಟುಂಬದವರ ಪಾಲಿಗೆ ಅದು ‘ಪ್ರತಿಷ್ಠೆಯ ಪಟ್ಟಿ’ಯಾಗಿ ಪರಿಣಮಿಸಿದೆ. ಈ ಒತ್ತಡವನ್ನು ನಿವಾರಿಸುವುದು ಹೊಸ ಶಿಕ್ಷಣ ನೀತಿಯ ಗುರಿ’ ಎಂದು ಮೋದಿ ಪ್ರತಿಪಾದಿಸಿದರು.</p>.<p>‘75ನೇ ಸ್ವಾತಂತ್ರ್ಯೋತ್ಸವದ ವರ್ಷದಲ್ಲಿ ಅಂದರೆ 2022ಕ್ಕೆ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಅಡಿಯಲ್ಲಿ ಸಿದ್ಧಪಡಿಸಿರುವ ಹೊಸ ಪಠ್ಯಕ್ರಮವನ್ನು ಅಭ್ಯಸಿಸುವಂತಾಗಬೇಕು. ಇದು ನಮ್ಮೆಲ್ಲರ ಜವಾಬ್ದಾರಿ’ ಎಂದು ಶಿಕ್ಷಕರು, ಪೋಷಕರು, ರಾಜ್ಯಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳನ್ನು ಉದ್ದೇಶಿಸಿ ಹೇಳಿದರು.</p>.<p>‘ಕೆಲಸ ಇನ್ನೂ ಅಂತಿಮವಾಗಿಲ್ಲ. ಎನ್ಇಪಿ ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಿದೆ. ಈ ದಿಶೆಯಲ್ಲಿ ನಾವೆಲ್ಲಾ ಒಗ್ಗೂಡಿ ಕೆಲಸ ಮಾಡಬೇಕು. ಎನ್ಇಪಿ ಬಗ್ಗೆ ಜನರಲ್ಲಿ ಹಲವು ಪ್ರಶ್ನೆಗಳಿದ್ದು, ಅವು ನ್ಯಾಯಸಮ್ಮತವಾಗಿವೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವ ಪೀಳಿಗೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಎನ್ಇಪಿಯು ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಿದೆ’ ಎಂದರು.</p>.<p><strong>ಭಾಷಣದ ಮುಖ್ಯಾಂಶಗಳು:</strong></p>.<p>*ಕಲಿಕೆಗೆ ಸುಲಭ ಮತ್ತು ಹೊಸ ತಂತ್ರಗಳನ್ನು ನಾವು ಉತ್ತೇಜಿಸಬೇಕು.</p>.<p>*ತೊಡಗಿಸಿಕೊಳ್ಳುವಿಕೆ, ಶೋಧನೆ, ಅನುಭವ, ಅಭಿವ್ಯಕ್ತಿ ಮತ್ತು ಉತ್ತಮ ಕಾರ್ಯನಿರ್ವಹಣೆಯು ಸುಲಭ ಹಾಗೂ ಹೊಸ ತಂತ್ರಗಳ ಮೂಲಗಳಾಗಿವೆ.</p>.<p>*ದೇಶದ ಪ್ರತಿ ಪ್ರದೇಶವೂ ಅದರದ್ದೇ ಆದ ಕೆಲ ವಿಶೇಷತೆಗಳನ್ನು ಹೊಂದಿರುತ್ತದೆ. ಆಯಾ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಅವುಗಳ ಬಗ್ಗೆ ತಿಳಿದುಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>