ಭೋಪಾಲ್: ಮಹಾಘಟಬಂಧನ್ ಅಧಿಕಾರಕ್ಕೆ ಬಂದಿದ್ದರೆ ಬಿಹಾರ ಮತ್ತೆ ‘ಜಂಗಲ್ ರಾಜ್ಯ’ ಆಗುತ್ತಿತ್ತು ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಅಭಿಪ್ರಾಯಪಟ್ಟಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಸ್ವಾಗತಿಸಿರುವ ಉಮಾ ಭಾರತಿ, ಮಹಾಘಟಬಂಧನ್ ನಾಯಕ ತೇಜಸ್ವಿ ಯಾದವ್ ಅವರಚುನಾವಣೆ ಹೋರಾಟವನ್ನು ಹೊಗಳಿದ್ದಾರೆ.
ತೇಜಸ್ವಿ ಯಾದವ್ ಒಳ್ಳೆಯ ಹುಡುಗ, ಆದರೆ ಅವರಿಗೆ ರಾಜಕೀಯ ಮತ್ತು ಆಡಳಿತದ ಅನುಭವ ಕಡಿಮೆ. ಒಂದು ಪಕ್ಷ ತೇಜಸ್ವಿ ಮುಖ್ಯಮಂತ್ರಿಯಾಗಿದ್ದಾರೆ, ಅವರ ತಂದೆ ಲಾಲು ಪ್ರಸಾದ್ ಹಿಂಬಾಗಿಲಿನಿಂದ ಆಡಳಿತ ನಡೆಸುತ್ತಿದ್ದರು. ಆಗ ಬಿಹಾರ ಮತ್ತೆ ಜಂಗಲ್ ರಾಜ್ಯ ಆಗುತ್ತಿತ್ತು ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಾಘಟಬಂಧನ ಅಧಿಕಾರಕ್ಕೆ ಬರದಿರುವುದೇ ಒಳ್ಳೆಯ ಬೆಳವಣಿಗೆ ಎಂದು ಅವರು ಬಿಹಾರ ವಿಧಾನಸಭಾ ಫಲಿತಾಂಶವನ್ನು ವಿಶ್ಲೇಷಣೆ ಮಾಡಿದ್ದಾರೆ.
Tejashwi is a very good boy. But Bihar was saved by the skin of its teeth because he wouldn't have been able to run the state. Lalu would have ultimately been at the helm pushing Bihar back into jungle raj. Tejashwi can lead but after he grows older: Uma Bharti, BJP leader pic.twitter.com/RAm0T9zIYn