<p><strong>ನವದೆಹಲಿ:</strong> ಪ್ರತಿಭಟನಾ ರೈತರೊಂದಿಗೆ ಗುರುವಾರ ಕೇಂದ್ರ ಸರ್ಕಾರವು ಎರಡನೇ ಸುತ್ತಿನ ಮಾತುಕತೆ ನಡೆಸಿದ್ದು, ಡಿಸೆಂಬರ್ 5ಕ್ಕೆ ಮುಂದಿನ ಹಂತದ ಮಾತುಕತೆ ನಿಗದಿಯಾಗಿದೆ.</p>.<p>ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತುಕತೆ ನಡೆಸಿದರು.</p>.<p>'ಸರ್ಕಾರವು ಯಾವುದೇ ಅಹಂ ತೋರದೆ ತರೆದ ಮನಸ್ಸಿನಿಂದ ಮಾತುಕತೆ ನಡೆಸುತ್ತಿದೆ. ಹೊಸ ಕಾಯ್ದೆಗಳು ಎಪಿಎಂಸಿಗಳನ್ನು ಅಂತ್ಯಗೊಳಿಸುತ್ತವೆ ಎನ್ನುವ ಕಳಕಳಿಯನ್ನು ರೈತರು ವ್ಯಕ್ತಪಡಿಸಿದ್ದಾರೆ' ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.</p>.<p>ರೈತರು ಕುಂದು–ಕೊರತೆಗಳನ್ನು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಕೋರ್ಟ್ಗಳಲ್ಲಿ ಸಲ್ಲಿಸಲು ಹೊಸ ಕಾಯ್ದೆಯಲ್ಲಿ ಅನುಕೂಲವಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮುಂದುವರಿಯಲಿದೆ, ಆ ಬಗ್ಗೆ ರೈತರಿಗೆ ಭರವಸೆ ನೀಡುತ್ತೇವೆ ಎಂದಿದ್ದಾರೆ.</p>.<p>ಮಂಡಿಯ ಹೊರ ಭಾಗದಲ್ಲಿ ವಹಿವಾಟು ನಡೆಯುವ ಬಗ್ಗೆ ಚರ್ಚೆಯಲ್ಲಿ ಪ್ರಶ್ನೆಗಳು ಎದ್ದವು, 'ಪ್ಯಾನ್ ಕಾರ್ಡ್ ಆಧಾರದ ಮೇಲೆ ಮಂಡಿಯ ಹೊರಗಡೆ ವಹಿವಾಟು ನಡೆಯುತ್ತದೆ. ವಹಿವಾಟು ನಡೆಸುವವರು ನೋಂದಾಯಿಸಿಕೊಂಡಿರಬೇಕಾಗುತ್ತದೆ, ಆ ಬಗ್ಗೆ ನಾವು ಖಚಿತಪಡಿಸಿಕೊಳ್ಳುತ್ತೇವೆ' ಎಂದು ಭರವಸೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪ್ರತಿಭಟನಾ ರೈತರೊಂದಿಗೆ ಗುರುವಾರ ಕೇಂದ್ರ ಸರ್ಕಾರವು ಎರಡನೇ ಸುತ್ತಿನ ಮಾತುಕತೆ ನಡೆಸಿದ್ದು, ಡಿಸೆಂಬರ್ 5ಕ್ಕೆ ಮುಂದಿನ ಹಂತದ ಮಾತುಕತೆ ನಿಗದಿಯಾಗಿದೆ.</p>.<p>ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತುಕತೆ ನಡೆಸಿದರು.</p>.<p>'ಸರ್ಕಾರವು ಯಾವುದೇ ಅಹಂ ತೋರದೆ ತರೆದ ಮನಸ್ಸಿನಿಂದ ಮಾತುಕತೆ ನಡೆಸುತ್ತಿದೆ. ಹೊಸ ಕಾಯ್ದೆಗಳು ಎಪಿಎಂಸಿಗಳನ್ನು ಅಂತ್ಯಗೊಳಿಸುತ್ತವೆ ಎನ್ನುವ ಕಳಕಳಿಯನ್ನು ರೈತರು ವ್ಯಕ್ತಪಡಿಸಿದ್ದಾರೆ' ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.</p>.<p>ರೈತರು ಕುಂದು–ಕೊರತೆಗಳನ್ನು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಕೋರ್ಟ್ಗಳಲ್ಲಿ ಸಲ್ಲಿಸಲು ಹೊಸ ಕಾಯ್ದೆಯಲ್ಲಿ ಅನುಕೂಲವಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮುಂದುವರಿಯಲಿದೆ, ಆ ಬಗ್ಗೆ ರೈತರಿಗೆ ಭರವಸೆ ನೀಡುತ್ತೇವೆ ಎಂದಿದ್ದಾರೆ.</p>.<p>ಮಂಡಿಯ ಹೊರ ಭಾಗದಲ್ಲಿ ವಹಿವಾಟು ನಡೆಯುವ ಬಗ್ಗೆ ಚರ್ಚೆಯಲ್ಲಿ ಪ್ರಶ್ನೆಗಳು ಎದ್ದವು, 'ಪ್ಯಾನ್ ಕಾರ್ಡ್ ಆಧಾರದ ಮೇಲೆ ಮಂಡಿಯ ಹೊರಗಡೆ ವಹಿವಾಟು ನಡೆಯುತ್ತದೆ. ವಹಿವಾಟು ನಡೆಸುವವರು ನೋಂದಾಯಿಸಿಕೊಂಡಿರಬೇಕಾಗುತ್ತದೆ, ಆ ಬಗ್ಗೆ ನಾವು ಖಚಿತಪಡಿಸಿಕೊಳ್ಳುತ್ತೇವೆ' ಎಂದು ಭರವಸೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>