100 ಹಾಸಿಗೆಗಳಿಗೆ ನಮಗೆ ಅನುಮತಿ ದೊರಕಿದೆ. ರೋಗಿಗಳ ಆರೈಕೆಗಾಗಿ ನಮ್ಮಲ್ಲಿ ಇಬ್ಬರು ಎಂಬಿಬಿಎಸ್ ವೈದ್ಯರು, ನಾಲ್ಕು ಆಯುರ್ವೇದ ವೈದ್ಯರು ಹಾಗೂ ದಾದಿಯರು ಇದ್ದಾರೆ. ಆರೋಗ್ಯ ಸಮಸ್ಯೆ ಹೊಂದಿರುವ ಸೋಂಕಿತರಿಗೆ ವೈದ್ಯರು ನೆರವಾಗಲಿದ್ದಾರೆ. ಕೋವಿಡ್ಗೆ ರಾಮಬಾಣವಾದ ಆರ್ಯುರ್ವೇದ ಔಷಧಿಗಳು ನಮ್ಮ ಬಳಿಯಿವೆ. ಆಯುರ್ವೇದವನ್ನು ಉತ್ತೇಜಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನಾವು ಗೋ ಮೂತ್ರ, ಸಗಣಿ, ಹಾಲು, ತುಪ್ಪ ಮತ್ತು ಮೊಸರು ಎಂಬ ಐದು ಅಂಶಗಳಿಂದ ಮಾಡಲ್ಪಟ್ಟ ವೇದಲಕ್ಷಣ ಪಂಚಗವ್ಯ ಆಯುರ್ವೇದ ಚಿಕಿತ್ಸೆಯನ್ನು ಒದಗಿಸುತ್ತಿದ್ದೇವೆ ಎಂದು ಟ್ರಸ್ಟಿ ರಾಮ ರತನ್ ದಾಸ್ ತಿಳಿಸಿದ್ದಾರೆ.