‘ಶನಿವಾರ ಮಗನ್ಪುರ ಗ್ರಾಮದ ಕೊಳದ ಬಳಿ ಮೂವರು ಮಕ್ಕಳು ಆಟವಾಡುತ್ತಿದ್ದರು. ಇದರಲ್ಲಿ ಒಬ್ಬ ಕೈತೊಳೆಯಲು ಎಂದು ಕೊಳದ ಬಳಿ ಹೋದಾಗ ಕಾಲು ಜಾರಿ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಮತ್ತಿಬ್ಬರು ಮಕ್ಕಳು ಕೊಳಕ್ಕೆ ಹಾರಿದ್ದಾರೆ. ಆದರೆ ಅವರು ಕೂಡ ನೀರಿನಲ್ಲಿ ಮುಳುಗಿದ್ದಾರೆ’ ಎಂದು ಗೋಲಾದ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಅಜಯ್ ಕುಮಾರ್ ರಾಜಕ್ ಅವರು ತಿಳಿಸಿದರು.