<p class="title"><strong>ಕೋಲ್ಕತ್ತ (ಪಿಟಿಐ):</strong> ಪಶ್ಚಿಮಬಂಗಾಳದ ಅಸನ್ಸೋಲ್ ಸ್ಥಳೀಯ ಸಂಸ್ಥೆಗೆ ಕೇಂದ್ರದ ಅನುದಾನ ಸಿಗದಂತೆ ವಂಚಿಸಲಾಗಿದೆ ಎಂದು ಟಿಎಂಸಿ ಮುಖಂಡರೊಬ್ಬರೇ, ಪಕ್ಷ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p class="title">ಈ ಕುರಿತು ಸ್ಥಳೀಯ ಸಂಸ್ಥೆಯ ಅಧ್ಯಕ್ಷ, ಟಿಎಂಸಿ ಮುಖಂಡ ಜಿತೇಂದ್ರ ತಿವಾರಿ ಅವರು, ಪೌರಾಡಳಿತ ಸಚಿವ ಫಿರ್ಹಾದ್ ಹಕೀಂ ಅವರಿಗೆ ಪತ್ರ ಬರೆದಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಗಾಗಿ ಪಟ್ಟಣಗಳನ್ನು ಆಯ್ಕೆ ಮಾಡುವಲ್ಲಿ ರಾಜ್ಯ ಸರ್ಕಾರದ ಲೋಪದಿಂದಾಗಿ ಅಸನ್ಸೋಲ್ ಸ್ಥಳೀಯ ಸಂಸ್ಥೆಗೆ ₹ 2000 ಅನುದಾನ ಸಿಗುವುದು ತಪ್ಪಿದೆ ಎಂದು ದೂರಿದ್ದಾರೆ.</p>.<p class="title">ಕೇಂದ್ರವು ಅಸನ್ಸೋಲ್ ಪಟ್ಟಣವನ್ನು ಆಯ್ಕೆ ಮಾಡಿತ್ತು. ಅದರೆ, ರಾಜ್ಯ ಸರ್ಕಾರ ಹೆಸರು ಕೈಬಿಡುವಂತೆ ನೋಡಿಕೊಂಡಿತು. ಪಟ್ಟಣ ಆಯ್ಕೆ ಆಗಿದ್ದರೆ ₹ 2000 ಕೋಟಿ ನೆರವು ಬರುತ್ತಿತ್ತು ಎಂದು ಪ್ರತಿಪಾದಿಸಿದರು.</p>.<p class="title">ಈ ಕುರಿತು ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ ತಿವಾರಿ ಅವರು, ‘ಅದೊಂದು ಗೋಪ್ಯವಾದ ಪತ್ರ. ಮಾಧ್ಯಮಗಳಿಗೆ ಸೋರಿಕೆ ಆಗಬಾರದಿತ್ತು. ಈ ಕುರಿತು ಏನು ಹೇಳಬೇಕೋ ಅದನ್ನು ಸಚಿವರಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಕೋಲ್ಕತ್ತ (ಪಿಟಿಐ):</strong> ಪಶ್ಚಿಮಬಂಗಾಳದ ಅಸನ್ಸೋಲ್ ಸ್ಥಳೀಯ ಸಂಸ್ಥೆಗೆ ಕೇಂದ್ರದ ಅನುದಾನ ಸಿಗದಂತೆ ವಂಚಿಸಲಾಗಿದೆ ಎಂದು ಟಿಎಂಸಿ ಮುಖಂಡರೊಬ್ಬರೇ, ಪಕ್ಷ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p class="title">ಈ ಕುರಿತು ಸ್ಥಳೀಯ ಸಂಸ್ಥೆಯ ಅಧ್ಯಕ್ಷ, ಟಿಎಂಸಿ ಮುಖಂಡ ಜಿತೇಂದ್ರ ತಿವಾರಿ ಅವರು, ಪೌರಾಡಳಿತ ಸಚಿವ ಫಿರ್ಹಾದ್ ಹಕೀಂ ಅವರಿಗೆ ಪತ್ರ ಬರೆದಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಗಾಗಿ ಪಟ್ಟಣಗಳನ್ನು ಆಯ್ಕೆ ಮಾಡುವಲ್ಲಿ ರಾಜ್ಯ ಸರ್ಕಾರದ ಲೋಪದಿಂದಾಗಿ ಅಸನ್ಸೋಲ್ ಸ್ಥಳೀಯ ಸಂಸ್ಥೆಗೆ ₹ 2000 ಅನುದಾನ ಸಿಗುವುದು ತಪ್ಪಿದೆ ಎಂದು ದೂರಿದ್ದಾರೆ.</p>.<p class="title">ಕೇಂದ್ರವು ಅಸನ್ಸೋಲ್ ಪಟ್ಟಣವನ್ನು ಆಯ್ಕೆ ಮಾಡಿತ್ತು. ಅದರೆ, ರಾಜ್ಯ ಸರ್ಕಾರ ಹೆಸರು ಕೈಬಿಡುವಂತೆ ನೋಡಿಕೊಂಡಿತು. ಪಟ್ಟಣ ಆಯ್ಕೆ ಆಗಿದ್ದರೆ ₹ 2000 ಕೋಟಿ ನೆರವು ಬರುತ್ತಿತ್ತು ಎಂದು ಪ್ರತಿಪಾದಿಸಿದರು.</p>.<p class="title">ಈ ಕುರಿತು ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ ತಿವಾರಿ ಅವರು, ‘ಅದೊಂದು ಗೋಪ್ಯವಾದ ಪತ್ರ. ಮಾಧ್ಯಮಗಳಿಗೆ ಸೋರಿಕೆ ಆಗಬಾರದಿತ್ತು. ಈ ಕುರಿತು ಏನು ಹೇಳಬೇಕೋ ಅದನ್ನು ಸಚಿವರಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>