ಈ ಕುರಿತು ಸ್ಥಳೀಯ ಸಂಸ್ಥೆಯ ಅಧ್ಯಕ್ಷ, ಟಿಎಂಸಿ ಮುಖಂಡ ಜಿತೇಂದ್ರ ತಿವಾರಿ ಅವರು, ಪೌರಾಡಳಿತ ಸಚಿವ ಫಿರ್ಹಾದ್ ಹಕೀಂ ಅವರಿಗೆ ಪತ್ರ ಬರೆದಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಗಾಗಿ ಪಟ್ಟಣಗಳನ್ನು ಆಯ್ಕೆ ಮಾಡುವಲ್ಲಿ ರಾಜ್ಯ ಸರ್ಕಾರದ ಲೋಪದಿಂದಾಗಿ ಅಸನ್ಸೋಲ್ ಸ್ಥಳೀಯ ಸಂಸ್ಥೆಗೆ ₹ 2000 ಅನುದಾನ ಸಿಗುವುದು ತಪ್ಪಿದೆ ಎಂದು ದೂರಿದ್ದಾರೆ.