<p><strong>ನವದೆಹಲಿ:</strong> ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಹುದ್ದೆಯಿಂದ ಕೈಬಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಮೂವರು ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.</p>.<p>ನಾರದಾ ಹಾಗೂ ಶ್ರದ್ಧಾ ಚಿಟ್ ಫಂಡ್ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನುತುಷಾರ್ ಮೆಹ್ತಾ ಅವರು ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು, ಈ ನಡೆಯನ್ನು ಟಿಎಂಸಿ ಸಂಸದರಾದ ಡೆರೆಕ್ ಒಬ್ರಿಯನ್, ಸುಖೇಂದು ಶೇಖರ್ ರಾಯ್ ಹಾಗೂ ಮಹುವಾ ಮೊಯಿತ್ರಾ ಪ್ರಶ್ನಿಸಿದ್ದಾರೆ.</p>.<p>ಸುವೇಂದು ಅವರು ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಭ್ರಷ್ಟಾಚಾರ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಅಂಥವರೊಂದಿಗಿನ ಸಾಲಿಸಿಟರ್ ಜನರಲ್ ಭೇಟಿಯು ಆ ಹುದ್ದೆಯ ಶಾಸನಬದ್ಧ ಕರ್ತವ್ಯ ಹಾಗೂ ಹಿತಾಸಕ್ತಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನಿಗೆ ಬರೆದ ಜಂಟಿ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.</p>.<p>ಮೆಹ್ತಾ ಅವರ ನಡೆ ಅಸಮರ್ಪಕವಷ್ಟೇ ಅಲ್ಲ; ಅದು ಸಾಲಿಸಿಟರ್ ಜನರಲ್ ಹುದ್ದೆಗೂ ಕಳಂಕ ತರುವಂಥದು ಎಂದು ಆರೋಪಿಸಿದ್ದಾರೆ.</p>.<p>ಆದರೆ, ಗುರುವಾರ ಮಧ್ಯಾಹ್ನ 3 ಗಂಟೆಗೆ ತಮ್ಮ ಗೃಹಕಚೇರಿಗೆ ಸುವೇಂದು ಅಧಿಕಾರಿ ಬಂದಿದ್ದನ್ನು ಒಪ್ಪಿಕೊಂಡಿರುವ ಮೆಹ್ತಾ, ಅವರೊಂದಿಗಿನ ಭೇಟಿಯನ್ನು ಅಲ್ಲಗಳೆದಿದ್ದಾರೆ.</p>.<p>‘ಆ ವೇಳೆ, ನನ್ನ ಕಚೇರಿಯಲ್ಲಿ ಪೂರ್ವನಿಗದಿಯಾದ ಸಭೆಯಲ್ಲಿ ನಾನು ಭಾಗವಹಿಸಿದ್ದರಿಂದ, ಸುವೇಂದು ಅವರಿಗೆ ನನ್ನ ಕಚೇರಿಯಲ್ಲಿಯೇ ಕಾಯುವಂತೆ ಸಿಬ್ಬಂದಿಯುತಿಳಿಸಿದ್ದಾರೆ.</p>.<p>ಸಭೆ ಮುಗಿದ ಮೇಲೆ ನನ್ನ ಸಹಾಯಕ, ಸುವೇಂದು ಬಂದಿರುವ ಮಾಹಿತಿ ನೀಡಿದರು. ಅವರನ್ನು ಭೇಟಿ ಮಾಡಲು ಸಾಧ್ಯವಾಗದು ಹಾಗೂ ಕಾಯಬೇಕಾಗಿ ಬಂದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾಗಿಯೂ ತಿಳಿಸುವಂತೆ ಅವರಿಗೆ ತಿಳಿಸಿದೆ. ಸುವೇಂದು ನನ್ನನ್ನು ಭೇಟಿಯಾಗದೇ ಅಲ್ಲಿಂದ ತೆರಳಿದ್ದಾರೆ’ ಎಂದು ಮೆಹ್ತಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಹುದ್ದೆಯಿಂದ ಕೈಬಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಮೂವರು ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.</p>.<p>ನಾರದಾ ಹಾಗೂ ಶ್ರದ್ಧಾ ಚಿಟ್ ಫಂಡ್ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನುತುಷಾರ್ ಮೆಹ್ತಾ ಅವರು ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು, ಈ ನಡೆಯನ್ನು ಟಿಎಂಸಿ ಸಂಸದರಾದ ಡೆರೆಕ್ ಒಬ್ರಿಯನ್, ಸುಖೇಂದು ಶೇಖರ್ ರಾಯ್ ಹಾಗೂ ಮಹುವಾ ಮೊಯಿತ್ರಾ ಪ್ರಶ್ನಿಸಿದ್ದಾರೆ.</p>.<p>ಸುವೇಂದು ಅವರು ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಭ್ರಷ್ಟಾಚಾರ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಅಂಥವರೊಂದಿಗಿನ ಸಾಲಿಸಿಟರ್ ಜನರಲ್ ಭೇಟಿಯು ಆ ಹುದ್ದೆಯ ಶಾಸನಬದ್ಧ ಕರ್ತವ್ಯ ಹಾಗೂ ಹಿತಾಸಕ್ತಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನಿಗೆ ಬರೆದ ಜಂಟಿ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.</p>.<p>ಮೆಹ್ತಾ ಅವರ ನಡೆ ಅಸಮರ್ಪಕವಷ್ಟೇ ಅಲ್ಲ; ಅದು ಸಾಲಿಸಿಟರ್ ಜನರಲ್ ಹುದ್ದೆಗೂ ಕಳಂಕ ತರುವಂಥದು ಎಂದು ಆರೋಪಿಸಿದ್ದಾರೆ.</p>.<p>ಆದರೆ, ಗುರುವಾರ ಮಧ್ಯಾಹ್ನ 3 ಗಂಟೆಗೆ ತಮ್ಮ ಗೃಹಕಚೇರಿಗೆ ಸುವೇಂದು ಅಧಿಕಾರಿ ಬಂದಿದ್ದನ್ನು ಒಪ್ಪಿಕೊಂಡಿರುವ ಮೆಹ್ತಾ, ಅವರೊಂದಿಗಿನ ಭೇಟಿಯನ್ನು ಅಲ್ಲಗಳೆದಿದ್ದಾರೆ.</p>.<p>‘ಆ ವೇಳೆ, ನನ್ನ ಕಚೇರಿಯಲ್ಲಿ ಪೂರ್ವನಿಗದಿಯಾದ ಸಭೆಯಲ್ಲಿ ನಾನು ಭಾಗವಹಿಸಿದ್ದರಿಂದ, ಸುವೇಂದು ಅವರಿಗೆ ನನ್ನ ಕಚೇರಿಯಲ್ಲಿಯೇ ಕಾಯುವಂತೆ ಸಿಬ್ಬಂದಿಯುತಿಳಿಸಿದ್ದಾರೆ.</p>.<p>ಸಭೆ ಮುಗಿದ ಮೇಲೆ ನನ್ನ ಸಹಾಯಕ, ಸುವೇಂದು ಬಂದಿರುವ ಮಾಹಿತಿ ನೀಡಿದರು. ಅವರನ್ನು ಭೇಟಿ ಮಾಡಲು ಸಾಧ್ಯವಾಗದು ಹಾಗೂ ಕಾಯಬೇಕಾಗಿ ಬಂದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾಗಿಯೂ ತಿಳಿಸುವಂತೆ ಅವರಿಗೆ ತಿಳಿಸಿದೆ. ಸುವೇಂದು ನನ್ನನ್ನು ಭೇಟಿಯಾಗದೇ ಅಲ್ಲಿಂದ ತೆರಳಿದ್ದಾರೆ’ ಎಂದು ಮೆಹ್ತಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>