2010ರ ಅಕ್ಟೋಬರ್ 25ರಂದು ಪುಣೆ–ಮುಂಬೈ ರಸ್ತೆಯಲ್ಲಿ ಕಾರಿನ ಟಯರ್ ಸ್ಫೋಟಗೊಂಡು ಸಂಭವಿಸಿದ್ದ ಅಪಘಾತದಲ್ಲಿ ಮಕರಂದ್ ಪಟವರ್ಧನ್ ಎಂಬುವವರು ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ₹1.25 ಕೋಟಿ ವಿಮೆ ನೀಡುವಂತೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಲಿಟೆಡ್ ಎಂಬ ವಿಮಾ ಕಂಪನಿಗೆ ಮೋಟರ್ ಅಪಘಾತ ಪರಿಹಾರ ನ್ಯಾಯಪೀಠವು 2016ರಲ್ಲಿ ಆದೇಶ ನೀಡಿತ್ತು. ಟೈಯರ್ ಸ್ಫೋಟವನ್ನು ‘ದೇವರ ಆಟ’ ಎಂದು ಕರೆದಿದ್ದ ವಿಮಾ ಸಂಸ್ಥೆಯು, ಭಾರಿ ಮೊತ್ತದ ವಿಮಾ ಪರಿಹಾರವನ್ನು ನೀಡುವಂತೆ ನೀಡಲಾಗಿದ್ದ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಮಾ ಸಂಸ್ಥೆಯ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.