‘ಅವರು (ಶಿಂದೆ) ಬಿಲ್ಲು ಮತ್ತು ಬಾಣದ ಚಿಹ್ನೆಯನ್ನೇ ಹೇಗೆ ಕದ್ದಿದ್ದಾರೆ. ನಾನು ಫೇಸ್ಬುಕ್ ಲೈವ್ ಮಾಡಿ, ಚುನಾವಣಾ ಆಯೋಗ ಏನು ಕೇಳಿದೆ, ನಾವು ಏನು ಒದಗಿಸಿದ್ದೇವೆ ಎಂಬುದನ್ನು ನಿಮಗೆ ಹೇಳುತ್ತೇನೆ. ಈ ಹಿಂದೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಎಐಎಡಿಎಂಕೆಯಲ್ಲೂ ಇದೇ ರೀತಿಯ ವಿವಾದಗಳಿದ್ದವು. ಆದರೆ, ಒಡೆದುಹೋದ ಬಣಕ್ಕೆ ಎಂದಿಗೂ ಮೂಲ ಪಕ್ಷದ ಹೆಸರು ಅಥವಾ ಚಿಹ್ನೆಯನ್ನು ನೀಡಲಾಗಿಲ್ಲ’ ಎಂದ ಉದ್ಧವ್, ‘ಚುನಾವಣೆಯಲ್ಲಿ ಕಳ್ಳನಿಗೆ ತಕ್ಕ ಪಾಠ ಕಲಿಸುವವರೆಗೆ ನಾವು ವಿರಮಿಸಬಾರದು. ಕೂಡಲೇ ಚುನಾವಣೆಗೆ ಸಿದ್ಧತೆ ಆರಂಭಿಸಿ’ ಎಂದು ಕರೆ ನೀಡಿದರು.