ನವದೆಹಲಿ: ಉಕ್ರೇನ್–ರಷ್ಯಾ ಯುದ್ಧದಿಂದಾಗಿ ಹೊಸ ‘ವಂದೇ ಭಾರತ್’ ರೈಲುಗಳ ನಿರ್ಮಾಣಕ್ಕೆ ಹಿನ್ನಡೆ ಉಂಟಾಗಿದೆ.
‘ವಂದೆ ಭಾರತ್ ರೈಲುಗಳ ನಿರ್ಮಾಣಕ್ಕೆ ಅಗತ್ಯವಿರುವ ಕೆಲ ಭಾಗಗಳನ್ನು ಉಕ್ರೇನ್ನಲ್ಲಿ ಉತ್ಪಾದಿಸಲಾಗುತ್ತಿದ್ದು, ಯುದ್ಧದಿಂದಾಗಿ ಇವುಗಳ ಆಮದು ಸ್ಥಗಿತಗೊಂಡಿದೆ. ಈ ಭಾಗಗಳು ಸಕಾಲದಲ್ಲಿ ತಲುಪುವಂತಾಗಲು ಪರ್ಯಾಯ ವ್ಯವಸ್ಥೆಯ ಹುಡುಕಾಟ ನಡೆಯುತ್ತಿದೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.
36,000 ಗಾಲಿಗಳನ್ನು (₹ 122 ಕೋಟಿ ವೆಚ್ಚ) ಪೂರೈಸುವಂತೆ ಭಾರತೀಯ ರೈಲ್ವೆಯು ಉಕ್ರೇನ್ನ ಕಂಪನಿಯೊಂದಕ್ಕೆ ಬೇಡಿಕೆ ಸಲ್ಲಿಸಿದೆ. ಈ ಗಾಲಿಗಳನ್ನು ಹೊತ್ತ ಹಡುಗು ಉಕ್ರೇನ್ನಿಂದ ಮುಂಬೈನ ಜವಾಹರಲಾಲ್ ನೆಹರೂ ಬಂದರಿಗೆ ಬರಬೇಕಿತ್ತು. ಯುದ್ಧದಿಂದಾಗಿ ಇದು ಸಾಧ್ಯವಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.