ನರೇಂದ್ರ ಸಿಂಗ್ ತೋಮರ್ ಅವರು ಏನು ಹೇಳಿದರೋ ಅದನ್ನೇ ಪುನರುಚ್ಚರಿಸಲು ನಾನು ಬಯಸುತ್ತೇನೆ. ನಾವು ಒಮ್ಮತಕ್ಕೆ ಬರಲಾಗುತ್ತಿಲ್ಲ, ಆದರೆ ನಾವು ನಿಮ್ಮ ಮುಂದೆ ಸರ್ಕಾರದ ಪ್ರಸ್ತಾಪವನ್ನು ಇಡುತ್ತಿದ್ದೇವೆಮತ್ತು ನೀವು (ರೈತರು)ಆ ಬಗ್ಗೆ ತೀರ್ಮಾನಿಸಬಹುದು. ಸರ್ಕಾರದ ಪ್ರಸ್ತಾಪ ಇನ್ನೂ ಇದೆ. ದಯವಿಟ್ಟು ಇದನ್ನು ನಿಮ್ಮ ಅನುಯಾಯಿಗಳಿಗೆ ತಿಳಿಸಿ. ಮಾತುಕತೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕು. ನಾವೆಲ್ಲರೂ ರಾಷ್ಟ್ರದ ಬಗ್ಗೆ ಯೋಚಿಸಬೇಕು' ಎಂದು ಸರ್ವಪಕ್ಷ ಸಭೆಯಲ್ಲಿ ಪಿಎಂ ಮೋದಿ ಹೇಳಿದರು.