'ಲಖಿಂಪುರದಲ್ಲಿ ನಡೆದ ಘಟನೆ ಬಳಿಕ, ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಧಿಕಾರಿಗಳು ಅಲ್ಲಿ ನಿಷೇಧಾಜ್ಞೆ ವಿಧಿಸಿದ್ದಾರೆ. ಅಲ್ಲದೆ ಲಖನೌನ ಸಿಸಿಎಸ್ ವಿಮಾನ ನಿಲ್ದಾಣದಲ್ಲಿ ಛತ್ತೀಸ್ಗಡದ ಸಿಎಂ ಮತ್ತು ಪಂಜಾಬ್ ಉಪಮುಖ್ಯಮಂತ್ರಿ ಆಗಮನಕ್ಕೆ ಅನುಮತಿ ನೀಡಬಾರದು' ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಕುಮಾರ್ ಅವಸ್ಥಿ ಅವರು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಅಕ್ಟೋಬರ್ 3 ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.